ಬುದ್ಧ, ಬಸವ, ಅಂಬೇಡ್ಕರ್ ತತ್ವಾದರ್ಶ ಪಾಲಿಸಿ: ಡಾ.ಎಚ್.ವಿಶ್ವನಾಥ

KannadaprabhaNewsNetwork |  
Published : Jun 30, 2025, 12:34 AM IST
29ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ 9ನೇ ವಾರ್ಷಿಕೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಹದಡಿ ವಿದ್ಯಾವರಣ್ಯ ಯೋಗೇಶ್ವರ ಮಠದ ಶ್ರೀ ಮುರುಳಿಧರ ಸ್ವಾಮೀಜಿ..................29ಕೆಡಿವಿಜಿ2-ದಾವಣಗೆರೆಯಲ್ಲಿ ಭಾನುವಾರ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ 9ನೇ ವಾರ್ಷಿಕೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ ಸಮಾರಂಭವು  ಹದಡಿ ವಿದ್ಯಾವರಣ್ಯ ಯೋಗೇಶ್ವರ ಮಠದ ಶ್ರೀ ಮುರುಳಿಧರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು. | Kannada Prabha

ಸಾರಾಂಶ

ಬುದ್ಧ, ಬಸವ, ಅಂಬೇಡ್ಕರ್‌ರ ವಿಶ್ವ ಮಾನವತೆಯ ಸಂದೇಶದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮೈಸೂರಿನ ಮುಕ್ತ ಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ), ಚಿಂತಕ, ಲೇಖಕ ಡಾ.ಎಚ್.ವಿಶ್ವನಾಥ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬುದ್ಧ, ಬಸವ, ಅಂಬೇಡ್ಕರ್‌ರ ವಿಶ್ವ ಮಾನವತೆಯ ಸಂದೇಶದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮೈಸೂರಿನ ಮುಕ್ತ ಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ), ಚಿಂತಕ, ಲೇಖಕ ಡಾ.ಎಚ್.ವಿಶ್ವನಾಥ ಕರೆ ನೀಡಿದರು.

ನಗರದ ರೋಟರಿ ಬಾಲ‍ಭವನದಲ್ಲಿ ಭಾನುವಾರ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ 9ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಉತ್ಸವ, ಬುದ್ಧ, ಬಸವ, ಅಂಬೇಡ್ಕರ್ ಪ್ರಸ್ತುತತೆ ವಿಚಾರಧಾರೆಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ, ರಾಷ್ಟ್ರೀಯ ಬುದ್ಧ ಶಾಂತಿ ಪ್ರಶಸ್ತಿ, ಶ್ರೀ ಜಗಜ್ಯೋತಿ ಬಸವೇಶ್ವರ ಕಾಯಕ ಪ್ರಶಸ್ತಿ, ಡಾ.ಬಿ.ಆರ್‌.ಅಂಬೇಡ್ಕರ್‌ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ತಳ ಸಮುದಾಯ, ಶೋಷಿತರು, ಮಹಿಳೆಯರಿಗೆ ಅವಕಾಶ ನೀಡಿ ಬದಲಾವಣೆಗೆ ಮುನ್ನುಡಿ ಬರೆದವರು ಬಸವಣ್ಣ ಎಂದು ತಿಳಿಸಿದರು.

‘ಎಮ್ಮೆಗೊಂದು ಚಿಂತೆ, ಸಮಗಾರಗೊಂದು ಚಿಂತೆ, ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ, ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ, ಒಲ್ಲೆ ಹೋಗು. ಸೆರಗ ಬಿಡು ಮರುಳೆ...’ ಎನ್ನುವ ವೈರಾಗ್ಯದ ನುಡಿಗಳನ್ನಾಡಿದ ಅಕ್ಕ ಮಹಾದೇವಿ ತನ್ನ ಕೂದಲನ್ನೇ ವಸ್ತ್ರವಾಗಿ ಮಾಡಿಕೊಂಡ ವೈರಾಗ್ಯ ಮೂರ್ತಿ ಎಂದರು.

ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶ ನೀಡಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಹುಟ್ಟದೇ ಹೋಗಿದ್ದರೆ ನಾವ್ಯಾರೂ ಹೀಗೆ ಮಾತನಾಡಲು ಸಾಧ್ಯವಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಸಾಧ್ಯವಿರಲಿಲ್ಲ ಎಂದರು.

ಬೆಂಗಳೂರಿನ ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಚಿತ್ರನಟ, ಸಾಹಿತಿ ಡಾ.ಗುಣವಂತ ಮಂಜು ಮಾತನಾಡಿ, ಪ್ರತಿಯೊಬ್ಬರಲ್ಲೂ ಬುದ್ಧ, ಬಸವ, ಅಂಬೇಡ್ಕರ್ ಇರುತ್ತಾರೆ ಎಂದರು.

ಗಾಯಕ ಸಿ.ಎಚ್.ಉಮೇಶ ನಾಯ್ಕ ನಾಡಗೀತೆ ಹಾಡಿದರು. ವಿದುಷಿ ಕೆ.ಜಿ.ಕವಿತಾ, ವಿದ್ಯಾರ್ಥಿನಿ ಕಾವ್ಯ ಭರತನಾಟ್ಯ ಪ್ರದರ್ಶಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹದಡಿ ವಿದ್ಯಾವರಣ್ಯ ಯೋಗೇಶ್ವರ ಮಠದ ಶ್ರೀ ಮುರುಳಿಧರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮಲ್ಲೇಶ ಎನ್.ಕುಕ್ಕವಾಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನಕುಮಾರ ದಾಸಪ್ಪ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಬೆಂಗಳೂರಿನ ಮಕ್ಕಳ ಆಸ್ಪತ್ರೆ ನಿಕಟ ಪೂರ್ವ ಎಂಡಿ, ಉದ್ಯಮಿ, ಸಾಹಿತಿ ಡಾ.ಎಸ್.ಅಕ್ಬರ್ ಬಾಷಾ, ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿ.ದ ಫಾರ್ಮಸಿ ವೈದ್ಯಾಧಿಕಾರಿ ಶಿವಾನಂದ ದಳವಾಯಿ, ಎಆರ್‌ಎಂ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಿ.ಅಂಜಿನಪ್ಪ, ಅಕಾಡೆಮಿ ವ್ಯವಸ್ಥಾಪಕ ಅಧ್ಯಕ್ಷ ಎಂ.ಸಂತೋಷಕುಮಾರ, ಯುವ ಸಾಹಿತಿ ಬಿ.ಎಲ್‌.ಗಂಗಾಧರ ನಿಟ್ಟೂರು ಇತರರು ಇದ್ದರು.

ದಾವಣಗೆರೆ ಸಾಧನೆ, ಕೊಡುಗೆ ಮರೆ ಮಾಚದಿರಿ!:

ಮಧ್ಯ ಕರ್ನಾಟಕ ದಾವಣಗೆರೆಗೆ ಅದರದ್ದೇ ಆದ ಹಿನ್ನೆಲೆ, ಮಹತ್ವ, ಸಾಧನೆ, ಇತಿಹಾಸವಿದೆ. ಬೆಣ್ಣೆ ನಗರಿ, ಬೆಣ್ಣೆ ದೋಸೆ ನಗರಿ ಅಂತಾ ಕರೆದು, ಊರಿನ ಸಾಧನೆ, ಕೊಡುಗೆಗಳನ್ನು ಮರೆಮಾಡುವ ಕೆಲಸವನ್ನು ಯೂರೂ ಸಹ ಮಾಡಬಾರದು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ನಾಗರಾಜ ಎಸ್.ಬಡದಾಳ್ ಮನವಿ ಮಾಡಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ