- ಶಿಬಾರ ವೃತ್ತ, ಕುರುಬರಗೇರಿ ವೃತ್ತದಲ್ಲಿ ರೈತರು, ಯುವಕರಿಗೆ ಮಜ್ಜಿಗೆ ವಿತರಣೆ । - - - ಕನ್ನಡಪ್ರಭ ವಾರ್ತೆ ಹರಿಹರ ಗ್ರಾಮ ದೇವತೆ ಊರಮ್ಮ ದೇವಿ ಉತ್ಸವದ 3ನೇ ದಿನ ಗುರುವಾರ ನಗರದ ಕಸಬಾ ಭಾಗದ ರೈತರಿಂದ ಆಕರ್ಷಕ ಎತ್ತುಗಳು ಮತ್ತು ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ನಡೆಸಿದರು.
ಹಳ್ಳಿಕಾರ್ ಮತ್ತು ವಿವಿಧ ತಳಿಯ ಎತ್ತುಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಎತ್ತುಗಳ ಕೋಡುಗಳಿಗೆ ಬಣ್ಣ ಬಳಿದು, ರಿಬ್ಬನ್, ಮೊಗಡಾ, ಮೂಗುದಾರ, ಕೊರಳಗಂಟೆ, ಗೊಂಡ್ಯಾ, ಕೊರಳಪಟ್ಟಿ, ಬಣ್ಣದ ಬಲೂನು, ಮಿಂಚು ಪಟ್ಟಿ ಸೇರಿದಂತೆ ವಿವಿಧ ವರ್ಣರಂಜಿತ ವಸ್ತುಗಳಿಂದ ಸಿಂಗಾರ ಮಾಡಿದ್ದು ನೋಡುಗರ ಕಣ್ಮನ ಸೆಳೆದವು.
ಜೋಡೆತ್ತಿನ ಬೆಲ್ಲದ ಬಂಡೆಗಳನ್ನು ಸಹ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ, ಮೆರವಣಿಗೆ ನಡೆಸಿದ್ದು, ಉತ್ಸವಕ್ಕೆ ಮೆರುಗು ತಂದಿತು. ಭಾಜಾಭಜಂತ್ರಿ, ತಮಟೆ ಬಡಿತದೊಂದಿಗೆ ರೈತರು, ಯುವಕರು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.ಹರಿಹರ ಮತ್ತು ವಿವಿಧ ತಾಲೂಕುಗಳಿಂದ ಆಗಮಿಸಿದ್ದ ದಷ್ಟಪುಷ್ಟ ವಿವಿಧ ತಳಿಯ ಎತ್ತುಗಳ ಮೆರವಣಿಗೆ ವಿಶೇಷತೆ ಮೆರೆಯಿತು. ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಹಬ್ಬಕ್ಕೆ ಆಗಮಿಸಿದ ಬೀಗರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ಸಾಗುವುದನ್ನು ಕಂಡರು. ಶಿಬಾರ ವೃತ್ತ ಹಾಗೂ ಕುರುಬರಗೇರಿ ವೃತ್ತದಲ್ಲಿ ರೈತರಿಗೆ ಮತ್ತು ಯುವಕರಿಗೆ ಮಜ್ಜಿಗೆ ವಿತರಣೆ ನಡೆಯಿತು.
ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ್ ನಂದಿಗಾವಿ, ಚೂರಿ ಜಗದೀಶ್, ಎಂ.ಎಚ್ ಚಂದ್ರಶೇಖರ್, ಕೆ.ಬಿ. ರಾಜಶೇಖರ್, ಬೆಣ್ಣೆಸಿದ್ದೇಶ್, ಗುತ್ತಿಗೆದಾರ ಸುಭಾಷ್ ಎಚ್.ಎಸ್., ರಾಜು, ಶೇಖರಗೌಡ ಪಾಟೀಲ್, ಪಾಲಾಕ್ಷಿ ಪೈ, ಮಲ್ಲಿಕಾರ್ಜುನ್ ಗದ್ಗಿಮಠ, ಚಿದಾನಂದ ಕಂಚಿಕೇರಿ, ಗೌಡರ ಸಂತೋಷ, ಕಣ್ಣಪ್ಪ, ಮಜ್ಜಿಗಿ ವೀರಭದ್ರಪ್ಪ, ಹಾವನೂರು ಈರಣ್ಣ, ಕರಿಬಸಪ್ಪ ಕಂಚಿಕೇರಿ, ಪರಶುರಾಮ್, ಗುರುಪ್ರಸಾದ್ ಸಿ.ಕೆ., ಶಂಭು ಹಾವನೂರ್, ಪೂಜಾರ್ ಹೇಮಣ್ಣ, ಹನುಮಂತಪ್ಪ ಬೆಣ್ಣೆ, ಶಂಭುಲಿಂಗ ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.
- - --27ಎಚ್ಆರ್ಆರ್4, 4ಎ:
ಹರಿಹರ ಗ್ರಾಮದೇವತೆ ಊರಮ್ಮ ದೇವಿಯ ಮೂರನೇ ದಿನದ ಉತ್ಸವ ಅಂಗವಾಗಿ ಕಸಬಾ ಭಾಗದ ರೈತರಿಂದ ಆಕರ್ಷಕ ಎತ್ತುಗಳು, ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ನಡೆಯಿತು.