ಮುಖ್ಯಮಂತ್ರಿ ಮೂಲಸೌಕರ್ಯ ವಿಶೇಷಾನುದಾನ ಬಳಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಖ್ಯಮಂತ್ರಿಗಳ ಮೂಲಸೌಕರ್ಯ ವಿಶೇಷಾನುದಾನ ೧.೧೦ ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಶಿವಪುರ ಗ್ರಾಮ ಪಂಚಾಯ್ತಿಯ ಯಡಬೆಟ್ಟ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾಲೇಜಿನಿಂದ ನಳಂದ ಬೌದ್ಧ ವಿವಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿ, ಸಮರ್ಪಕ ರಸ್ತೆಯಿರಲಿಲ್ಲ. ಬದಲಾಗಿ ಕಲ್ಲು ಮುಂಟಿಗಳ ರಸ್ತೆಯಲ್ಲಿ ಜನರು ಅನಾಯಾಸವಾಗಿ ಸಂಚಾರ ಮಾಡಬೇಕಿತ್ತು. ಸುಗಮ ರಸ್ತೆ ಮಾಡಿಕೊಡಬೇಕು ಎಂದು ಈ ಭಾಗದ ಸಾರ್ವಜನಿಕರು ಮನವಿ ಮಾಡಿದ್ದರು. ಅವರ ಮನವಿ ಮೇರೆಗೆ ಉತ್ತಮ ಡಾಂಬರು ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ.