)
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಚ್ಎಸ್ಆರ್ ಲೇಔಟ್ ನಿವಾಸಿಯಾಗಿರುವ ಗೋಪಾಲ್ ಕೆ.ಆರ್. ಸಲುಜಾ ಎಂಬುವರು ನೀಡಿದ ದೂರಿನನ್ವಯ ಶೇಷಾದ್ರಿಪುರಂ ನಿವಾಸಿಯಾಗಿರುವ ಚಾರ್ಟರ್ಡ್ ಅಕೌಂಟೆಂಟ್ ರಿಷಿ ಜೈನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:ದೂರುದಾರರಾದ ಗೋಪಾಲ್ ಅವರು ಮಾನವಶಕ್ತಿ ಸಲಹಾ ಸಂಸ್ಥೆ ನಡೆಸುತ್ತಿದ್ದು, 2008 ರಿಂದ ಇವರ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸಲು ಶೇಷಾದ್ರಿಪುರದ ನಿವಾಸಿಯಾದ ಚಾರ್ಟರ್ಡ್ ಅಕೌಂಟೆಂಟ್ ರಿಷಿ ಆರ್ ಜೈನ್ ಅವರನ್ನು ನೇಮಿಸಿಕೊಂಡಿದ್ದರು. ಇವರ ಸಂಸ್ಥೆಯ ವೃತ್ತಿಪರ ತೆರಿಗೆ ಲೆಕ್ಕಾಚಾರಗಳು, ಫೈಲಿಂಗ್ಗಳು ಮತ್ತು ರಿಟರ್ನ್ಸ್ ಇವರೇ ಮಾಡುತ್ತಿದ್ದರು. ಇದಕ್ಕೆ ದೂರುದಾರರು ಶುಲ್ಕವನ್ನು ಪಾವತಿಸುತ್ತಿದ್ದರು. ಈ ತೆರಿಗೆ ವಿಷಯಗಳ ಬಗ್ಗೆ ದೂರುದಾರರಿಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ, ಆತನನ್ನು ಸಂಪೂರ್ಣವಾಗಿ ನಂಬಿದ್ದರು. ಫೈಲಿಂಗ್ ಮತ್ತು ಪಾವತಿಗಳಿಗೆ ಆತನ ಮೇಲೆಯೇ ಅವಲಂಬಿತರಾಗಿದ್ದರು.
ನನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನನಗೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಿರುವ ರಿಷಿ ಆರ್ ಜೈನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉದ್ಯಮಿ ಗೋಪಾಲ್ ಸಲುಜಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.