ಹಣ, ಅಧಿಕಾರದಿಂದ ತೃಪ್ತಿ ಸಿಗಲ್ಲ: ಚನ್ನವೀರ ಶಿವಯೋಗಿಗಳು

KannadaprabhaNewsNetwork |  
Published : Jan 15, 2024, 01:51 AM ISTUpdated : Jan 15, 2024, 01:03 PM IST
ಹರಪನಹಳ್ಳಿ ಪಟ್ಟಣದ ಕಾಶಿಮಠದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್‌ನ ನೂತನ ಪದಾಧಿಕಾರಿಗಳ ಕಾಯಕದೀಕ್ಷೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಚನ್ನವೀರ ಶಿವಯೋಗಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಶರಣರ ವಚನಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಜಾತಿ- ಭೇದಭಾವ ತೊರೆದು ಸಮಾನತೆಯನ್ನು ಬೆಳೆಸಿಕೊಳ್ಳಬೇಕು ಎಂದು ಲಿಂಗನಾಯಕನಹಳ್ಳಿ ಮಠದ ಚನ್ನವೀರ ಶಿವಯೋಗಿಗಳು ತಿಳಿಸಿದರು

ಹರಪನಹಳ್ಳಿ: ಹಣ, ಅಧಿಕಾರದಿಂದ ತೃಪ್ತಿ ಸಿಗಲ್ಲ. ಶರಣರ ಮಾತುಗಳ ಪಾಲನೆಯಿಂದ ತೃಪ್ತಿ ಸಾಧ್ಯ ಎಂದು ಲಿಂಗನಾಯಕನಹಳ್ಳಿ ಮಠದ ಚನ್ನವೀರ ಶಿವಯೋಗಿಗಳು ತಿಳಿಸಿದರು.

ಪಟ್ಟಣದ ಕಾಶಿಮಠದಲ್ಲಿ ಶರಣ ಸಾಹಿತ್ಯ ಜಿಲ್ಲಾ ಘಟಕ ಹಾಗೂ ಶರಣ ಸಾಹಿತ್ಯ ತಾಲೂಕು ಘಟಕದ ವತಿಯಿಂದ ನಡೆದ ಶರಣ ಸಾಹಿತ್ಯ ಪರಿಷತ್‌ನ ನೂತನ ಪದಾಧಿಕಾರಿಗಳ ಕಾಯಕದೀಕ್ಷೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶರಣರ ವಚನಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಜಾತಿ- ಭೇದಭಾವ ತೊರೆದು ಸಮಾನತೆಯನ್ನು ಬೆಳೆಸಿಕೊಳ್ಳಬೇಕು. ಜತೆಗೆ ಅನ್ನ ಹಾಗೂ ಅಕ್ಷರ, ದಾಸೋಹ ಮಾಡಿ ಚಿಂತನಶೀಲರಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ. ರವೀಂದ್ರನಾಥ ಅವರು ಹಾಲಮ್ಮ ಸಿದ್ದಪ್ಪ ದತ್ತಿಯ ಶರಣ ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ಜಿಲ್ಲೆಯಲ್ಲಿ ಈಗಾಗಲೇ ಕೆಲವು ತಾಲೂಕುಗಳಲ್ಲಿ ಶರಣ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿದ್ದು, ದತ್ತಿ ದಾನಿಗಳ ಆಶಯದಂತೆ ವಚನ ಸಾಹಿತ್ಯಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯದ ಕೊಡುಗೆ ಬಹುದೊಡ್ಡದಿದ್ದು, ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಠಗಳು ಬಸವತತ್ವವನ್ನು ಪಸರಿಸುವ ಕೆಲಸ ಮಾಡಿವೆ ಎಂದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪೂಜಾರ್ ಷಣ್ಮುಖಪ್ಪ ಮಾತನಾಡಿ, ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ವರ್ಣಭೇದ ಲಿಂಗಭೇದ ಆಳಿಸಿ ಹಾಕಿದೆ. 21ನೇ ಶತಮಾನದಲ್ಲಿನ ಕಂದಾಚಾರ ಲಿಂಗ ಅಸಮಾನತೆ, ಮೌಢ್ಯತೆ ಆಳಿಸಿ ಹಾಕುವ ಅವಶ್ಯಕತೆ ಇದೆ ಎಂದರು.

ಶರಣ ಸಾಹಿತ್ಯ ತಾಲೂಕು ಘಟಕದ ಗೌರವಾಧ್ಯಕ್ಷ ಸಿ. ಸಿದ್ದಪ್ಪ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ. ರಾಜಶೇಖರ ಮಾತನಾಡಿದರು.

ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್, ಸಮಾಜ ಸೇವಕಿ ಎಚ್.ಎಂ. ಲಲಿತಮ್ಮ, ಹಗರಿಬೊಮ್ಮನಹಳ್ಳಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಇಂದುಮತಿ, ಕೆ.ಎಸ್. ವೀರಭದ್ರಪ್ಪ, ಎಸ್.ಬಿ. ಪಾಟೀಲ್, ಬಿ. ರಾಜಶೇಖರ, ಜಿ. ಮಹಾದೇವಪ್ಪ, ಕುಸುಮ ಜಗದೀಶ, ಐ. ಬಸವರಾಪ್ಪ, ಕೆ. ಉಮಾಪತಿ, ನಾಗರಾಜ ಸಿ. ಪಾಟೀಲ್, ಶಿಕ್ಷಕರಾದ ಚನ್ನಪ್ಪ, ಡಾ. ಸಂತೋಷ, ಎ.ಕೆ.ಬಿ. ಶೇಖರಪ್ಪ, ಕೊಟ್ರಯ್ಯ, ಪಿ. ಶಂಬುಲಿಂಗನಗೌಡ, ಪಿ. ಕೊಟ್ರಬಸವನಗೌಡ, ಡಿ. ಶಂಕ್ರಣ್ಣ, ವಿಠೋಬ, ಗಾಯತ್ರಮ್ಮ, ಯು.ಎಸ್. ಶಕುಂತಲಮ್ಮ, ಪುಷ್ಪ ದಿವಾಕರ್, ಡಿ. ರಾಮನಮಲಿ, ವಿಜಯ ದಿವಾಕರ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ