ಕಾರಟಗಿ:
ಇಲ್ಲಿನ ಗೃಹ ಕಚೇರಿಯಲ್ಲಿ ಅವರು ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಹಸೀಲ್ದಾರ್ ಹಾಗೂ ನೀರಾವರಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಿ ಮಾತನಾಡಿದರು.
ಭತ್ತದ ಬೆಳೆಗೂ ನೀರು ಬೇಕು ಮತ್ತು ಜನ-ಜಾನುವಾರುಗಳಿಗೂ ಕುಡಿಯಲು ನೀರು ಬೇಕು. ರೈತರ ಸಮಸ್ಯೆಯನ್ನು ನಾನು ಅರಿತಿದ್ದೇನೆ. ಐದಾರು ದಿನ ಕಾಲುವೆ ನೀರು ಅನವಶ್ಯಕವಾಗಿ ಪೋಲಾಗದಂತೆ ನಿಗಾವಹಿಸಬೇಕು ಎಂದರು.ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಇಳಿಕೆಯಾಗಿದೆ. ಆದರೆ, ನಮ್ಮ ಭಾಗದಲ್ಲಿ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡಿರುವ ರೈತರಿಗೆ ನೀರನ ಅವಶ್ಯಕತೆ ಇದೆ.
ನೀರು ಕೊರತೆಯಾಗುತ್ತಿರುವ ಕುರಿತು ರೈತರು ೩೧ನೇ ವಿತರಣಾ ಕಾಲುವೆ ಮೇಲೆ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ರೈತರಿಗೂ ಮತ್ತು ಕುಡಿಯುವ ನೀರಿಗೂ ತೊಂದರೆಯಾಗದಂತೆ ನಿರ್ವಹಣೆ ಮಾಡಬೇಕು. ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾಲುವೆ ನೀರಿನ ನಿರ್ವಹಣೆಗೆ ಮುಂದಾಗಬೇಕು ಎಂದು ಸೂಚಿಸಿದ ಸಚಿವರು, ಭತ್ತದ ಬೆಳೆ ಈಗಾಗಲೇ ಕಟಾವಿಗೆ ಬರುತ್ತಿದೆ. ಭತ್ತದ ಬೆಳೆ ರೈತರ ಕೈ ಸೇರುವವರೆಗೂ ಈ ಭಾಗದಲ್ಲಿ ಮಳೆ, ಗಾಳಿ ಬರದಂತೆ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಸಚಿವರು ಹೇಳಿದರು.
ಗಂಗಾವತಿ ತಹಸೀಲ್ದಾರ್ ಯು. ನಾಗರಾಜ, ಕಾರಟಗಿ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಕನಕಗಿರಿ ತಹಸೀಲ್ದಾರ್ ವಿಶ್ವನಾಥ್ ಮುರಡಿ, ನೀರಾವರಿ ನಿಗಮದ ಇಇ ಎಂ.ಎಸ್. ಗೋಡೆಕರ್, ಎಇಇಗಳಾದ ನಾಗಪ್ಪ, ವೆಂಕಟೇಶ, ಸಿಪಿಐ ಸುಧೀರ್ ಬೆಂಕಿ, ಎಇಗಳಾದ ವಿರೂಪಾಕ್ಷಿ, ಪಲ್ಲವಿ, ಕಿರಣಕುಮಾರ, ರೈತ ಮುಖಂಡ ದಶರಥ ರೆಡ್ಡಿ, ಶರಣೇಗೌಡ ಮಾಲಿಪಾಟೀಲ್ ಮತ್ತಿತರು ಇದ್ದರು.