ಕನ್ನಡಪ್ರಭ ವಾರ್ತೆ ಉಡುಪಿ
ಈ ವರ್ಷದ ಮ್ಯಾರಾಥಾನ್ಗೆ ‘ರನ್ ಫಾರ್ ವುಮನ್ ಎಂಪವರ್ಮೆಂಟ್’ ಎಂಬ ಧ್ಯೇಯವನ್ನು ಹೊಂದಲಾಗಿದೆ. ಮಣಿಪಾಲದ ವೃತ್ತ ಕಚೇರಿಯಿಂದ ಆರಂಭವಾಗಿ, ಆರ್.ಎಸ್.ಬಿ. ಸಭಾಭವನ ಮುಂಭಾಗದಿಂದ ವೇಣುಗೋಪಾಲ ದೇವಸ್ಥಾನ, ಶಾಂತಿನಗರ, ಟ್ಯಾಪ್ಮಿಯಾಗಿ ಕಬ್ಯಾಡಿಯಲ್ಲಿ ಕೊನೆಯಾಗಲಿದೆ.
ಅಂದು ಬೆಳಗ್ಗೆ 5.30 ಕ್ಕೆ 21 ಕಿ.ಮೀ., 6 ಗಂಟೆಗೆ 10 ಕಿ.ಮೀ., 5 ಕಿ.ಮೀ 6.30ಕ್ಕೆ ಹಾಗೂ 3 ಕಿ.ಮೀ 7 ಗಂಟೆಗೆ ಆರಂಭವಾಗಲಿದ್ದು, 9.30 ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮ್ಯಾರಥಾನ್ 3, 5, 10 ಹಾಗು 21 ಕಿ.ಮೀ. ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದ್ದು, ವಿಜೇತರಿಗೆ ಒಟ್ಟು 5 ಲಕ್ಷ ರು. ನಗದು ಬಹುಮಾನ ನೀಡಲಾಗುತ್ತದೆ ಎಂದವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಪ್ರಬಂಧಕ ದುರ್ಗಾಪ್ರಸಾದ್, ಹಿರಿಯ ಪ್ರಬಂಧಕರಾದ ಸೂರಜ್ ಉಪ್ಪೂರು, ವಿಶಾಲ್ ಸಿಂಗ್, ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ ಮೂರ್ತಿ ಇದ್ದರು.