ಟ್ಯಾಂಕ್ ಪಾರ್ಕ್ ಒಳಗಡೆ ಗಾಂಜಾ ವಶ: ಇಬ್ಬರ ಬಂಧನ

KannadaprabhaNewsNetwork |  
Published : Jan 06, 2026, 02:00 AM IST
ಕ್ಯಾಪ್ಷನ5ಕೆಡಿವಿಜಿ32, 33, ದಾವಣಗೆರೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದರು. | Kannada Prabha

ಸಾರಾಂಶ

ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಕೆಟಿಜೆ ನಗರದ ಕೆ.ಎಲ್.ರಾಕೇಶ್ ಹಾಗೂ ಶ್ರೀರಾಮ ಬಡಾವಣೆಯ ಖಾಜಾ ಮೋಹಿದ್ದೀನ್ ಸಾಹಿಲ್ ಎಂಬವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ₹60 ಸಾವಿರ ಮೌಲ್ಯದ ಗಾಂಜಾ ವಶಪಡಿಕ್ಕೆ ಪಡೆದಿದ್ದಾರೆ.

ದಾವಣಗೆರೆ: ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಕೆಟಿಜೆ ನಗರದ ಕೆ.ಎಲ್.ರಾಕೇಶ್ ಹಾಗೂ ಶ್ರೀರಾಮ ಬಡಾವಣೆಯ ಖಾಜಾ ಮೋಹಿದ್ದೀನ್ ಸಾಹಿಲ್ ಎಂಬವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ₹60 ಸಾವಿರ ಮೌಲ್ಯದ ಗಾಂಜಾ ವಶಪಡಿಕ್ಕೆ ಪಡೆದಿದ್ದಾರೆ.

ಹೊಸ ವರ್ಷ ದಿನದಂದು ಕೆಟಿಜೆ ನಗರ ಠಾಣಾ ವ್ಯಾಪ್ತಿಯ ಸರಸ್ವತಿ ನಗರದ ಟ್ಯಾಂಕ್ ಪಾರ್ಕ್ ಒಳಗಡೆ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿದ್ದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಪೊಲೀಸರು ದಾಳಿ ನಡೆಸಿದರು.

ಆರೋಪಿಗಳನ್ನು ವಿಚಾರಣೆ ಮಾಡಿದಾಗ ಸುಮಾರು 1165 ಗ್ರಾಂ ಗಾಂಜಾ ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಗಾಂಜಾದ ಮೌಲ್ಯ ₹60 ಸಾವಿರ, 2 ಚಂದ್ರಾಕೃತಿಯ ಕಬ್ಬಿಣದ ಮಚ್ಚುಗಳು, ₹1500 ನಗದು ಇನ್ನಿತರೆ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಉಪವಿಭಾಗದ ಡಿವೈಎಸ್‌ಪಿ ಬಿ.ಶರಣಬಸವೇಶ್ವರ ನೇತೃತ್ವದಲ್ಲಿ ಕೆಟಿಜೆ ನಗರ ಪಿಐ ಎಚ್.ಎಸ್.ಸುನೀಲ್ ಕುಮಾರ್, ಪಿಎಸ್‌ಐ ಲತಾ, ಸಿಬ್ಬಂದಿ ಸುರೇಶ್ ಬಾಬು, ಮಂಜನಗೌಡ, ಮಹಮ್ಮದ್ ರಫಿ, ನಾಗರಾಜ, ಮಂಜಪ್ಪ, ಸಿದ್ದಪ್ಪ ರವಿನಾಯ್ಕ, ಅಂಬರೀಶ್, ವಸಂತ ಸಿಬ್ಬಂದಿ ತಂಡ ದಾಳಿ ನಡೆಸಿತ್ತು. ಈ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-5ಕೆಡಿವಿಜಿ32, 33:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು