ಶಿಗ್ಗಾಂವಿ: ಪಟ್ಟಣದ ವೀರಾಂಜನೇಯ ದೇವಸ್ಥಾನದಲ್ಲಿ ನಡೆದ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಕೆಲ ಮುಖಂಡರು ಕರೆ ನೀಡಿರುವ ಬಂದ್ಗೆ ಕಾರು ಮತ್ತು ಟ್ಯಾಕ್ಸಿ ಸಂಘದ ಸಮ್ಮತಿ ಇಲ್ಲ ಎಂದು ಸಂಘದ ಅಧ್ಯಕ್ಷ ಸಿದ್ದಪ್ಪ ಕಾಳೆ ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.
ಆದರೆ ನಗರದ ಹಿತದೃಷ್ಟಿಯಿಂದ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದೆ. ಹೀಗಾಗಿ ಕೆಲ ಮುಖಂಡರು ನೀಡಿರುವ ಬಂದ್ ಕರೆಗೆ ಕಾರು ಮತ್ತು ಟ್ಯಾಕ್ಸಿ ಸಂಘದ ಸಮ್ಮತಿ ಇರುವುದಿಲ್ಲ. ಯಾರಾದರೂ ಸ್ವಯಂಪ್ರೇರಿತವಾಗಿ ಬಂದ್ ನಡೆಸಿದರೆ ಅದಕ್ಕೂ ಸಂಘಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಂಘದ ಅಧ್ಯಕ್ಷ ಸಿದ್ದಪ್ಪ ಕಾಳೆ ಹಾಗೂ ಸರ್ವ ಸದಸ್ಯರಾದ ರವಿ ಕೆ. ಚವ್ಹಾಣ, ರವೀಂದ್ರ ವೈ. ಬಳಿಗೇರ, ವಿನಾಯಕ ಸಿ.ಕುಂದಗೋಳ, ರಮೇಶ ವನಹಳ್ಳಿ, ಗಂಗಾಧರ ರಾಮಣ್ಣಾ ನೆಲ್ಲೂರ, ಮಲ್ಲಿಕಾರ್ಜುನ ನವಲಗುಂದ, ಸಂಜೀವ ಬಾರಿಗಿಡದ, ಗುರುರಾಜ ಹೊಣ್ಣನವರ, ಸಹಿ ಮಾಡಿದ ಮನವಿಯನ್ನು ಶಿಗ್ಗಾಂವಿ ಸಿಪಿಐ ಅವರಿಗೆ ಸಲ್ಲಿಸಲಾಗಿದೆ.