ಮುಂಡಗೋಡ: ನಿರಂತರ ಧಾರಾಕಾರವಾಗಿ ಸುರಿದ ಮಳೆಗೆ ಅತ್ತಿವೇರಿ ಗೌಳಿ ದಡ್ಡಿ ಸೋಮನಕೆರೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಸುಮಾರು ೧೨ ಎಮ್ಮೆಗಳ ಕಳೇಬರಗಳು ಬುಧವಾರ ಪತ್ತೆಯಾಗಿವೆ.ಕೊಂಡುಬಾಯಿ ಜನ್ನು ಖರಾತ್ ಅವರ ೩ ಎಮ್ಮೆಗಳು, ಕೊಂಡು ಬಾಗು ಎಡಗೆ ಅವರ ೬ ಎಮ್ಮೆಗಳು, ಜಿಮ್ಮು ಬಾಬು ಎಡಗೆ ಅವರ ೨ ಎಮ್ಮೆಗಳು ಮತ್ತು ವಡಗಟ್ಟದ ವಾಚಮನ್ ಈರಪ್ಪ ಅವರ ೧ ಎಮ್ಮೆ ಸೇರಿದಂತೆ ಒಟ್ಟು ೧೨ ಎಮ್ಮೆಗಳು ಹಳ್ಳದಲ್ಲಿ ಮೃತಪಟ್ಟಿವೆ.ಮಂಗಳವಾರ ಮೇಯಲು ಹೋಗಿದ್ದ ಎಮ್ಮೆಗಳು ಭಾರಿ ಮಳೆಯ ರಭಸಕ್ಕೆ ಅತ್ತಿವೇರಿ ಡ್ಯಾಂಗೆ ಸೇರುವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಇದೇ ರೀತಿ ಮಳೆಯ ರೌದ್ರಾವತಾರಕ್ಕೆ ತಾಲೂಕಿನ ಇನ್ನು ಹಲವು ಭಾಗಗಳಲ್ಲಿ ಜಾನುವಾರುಗಳು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಕೇಳಿ ಬಂದಿದೆ. ವಾಹನಗಳ ಮೇಲೆ ಆಲದ ಮರದ ಕೊಂಬೆ ಬಿದ್ದು ಹಾನಿ
ಮರದ ಅಡಿಯಲ್ಲಿ ಯಾರೂ ಇಲ್ಲವಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಮರದ ಕೊಂಬೆ ರಸ್ತೆಯ ಮೇಲೆಯೇ ಬಿದ್ದಿರುವುದರಿಂದ ಕೆಲಕಾಲ ಜನರಲ್ಲಿ ಆತಂಕದ ವಾತಾವರಣ ಮೂಡಿದ್ದು, ನಂತರ ಮರದ ಕೊಂಬೆಯಲ್ಲಿ ಸ್ಥಳಾಂತರ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.