ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆಗಳ ವ್ಯಂಗ್ಯಚಿತ್ರಕಾರರಾದ ಇವರು, ಇತರೆ ದೈನಿಕಗಳು ಹಾಗೂ ನಿಯತಕಾಲಿಕೆಗಳಲ್ಲೂ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದಾರೆ. ಈವರೆಗೆ ಸುಮಾರು 19 ಸಾವಿರ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ.
ಡಾ. ಶಂಕರದಯಾಳ್ ಶರ್ಮ, ಕೆ.ಆರ್. ನಾರಾಯಣನ್, ಪಿ.ವಿ. ನರಸಿಂಹರಾವ್, ದಲೈಲಾಮ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ನರೇಂದ್ರ ಮೋದಿ, ಕಪಿಲ್ ದೇವ್, ಶೋಭಾ ಡೇ, ಎಸ್. ಜಾನಕಿ, ಜೇಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮುಲ್ಕ್ ರಾಜ್ ಆನಂದ್, ಡಾ.ಸುಬ್ರಮಣಿಯನ್ ಸ್ವಾಮಿ, ಡೆಸ್ಮಂಡ್ ಟುಟು, ಪಿ.ಟಿ ಉಷಾ, ಬಿಸ್ಮಿಲ್ಲಾ ಖಾನ್, ಉಸ್ತುದಾ ಜಾಕೀರ್ ಹುಸೇನ್, ಇರ್ಫಾನ್ ಖಾನ್, ಡಾ.ರಾಜಕುಮಾರ್, ಡಾ.ಮಹಮದ್ ಯೂನಸ್, ಕಿರಣ್ ಬೇಡಿ, ಕದ್ರಿ ಗೋಪಾಲನಾಥ್. ಜಾರ್ಜ್ ಫರ್ನಾಂಡಿಸ್. ರಾಮಕೃಷ್ಣ ಹೆಗಡೆ ಮುಂತಾದವರ ವ್ಯಂಗ್ಯಚಿತ್ರಗಳನ್ನು ರಚಿಸಿ, ಅವರನ್ನು ಭೇಟಿಯಾಗಿ ಹಸ್ತಾಕ್ಷರ ಪಡೆದಿದ್ದಾರೆ. 1994 ರಲ್ಲಿ ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ 276 ಅಡಿ ಉದ್ದದ ಗ್ರೀಟಿಂಗ್ ಕಾರ್ಡ್ ರೂಪಿಸಿ, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ.ಮೈಸೂರು ಮಾತ್ರವಲ್ಲದೇ ಲಂಡನ್, ಮಲೇಷಿಯಾ, ಅಮೆರಿಕಾ, ಥೈವಾನ್, ಸಿಂಗಾಪುರ ಮೊದಲಾದ ಕಡೆ ಕೂಡ ವ್ಯಂಗ್ಯಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರು. ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧೆಡೆ ವ್ಯಂಗ್ಯಚಿತ್ರಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಅಮೆರಿಕಾದ ಫುಲ್ ಬ್ರೈಟ್ ಫೆಲೋಶಿಪ್ ಕೂಡ ಪಡೆದಿದ್ದಾರೆ.
ಜೆಎಸ್ಎಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುವಾಗ ಗ್ರಂಥಾಲಯಕ್ಕೆ ಭೇಟಿ ನೀಡಿ, ಪತ್ರಿಕೆಗಳು, ನಿಯತಕಾಲಿಕೆಗಳನ್ನು ಗಮನಿಸುತ್ತಿದ್ದರು. ಸಂಪಾದಕೀಯ ಪುಟದಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯಚಿತ್ರಗಳು ಇವರ ಗಮನ ಸೆಳೆದವು. ಇದರಿಂದ ಚಿತ್ರಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು, ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆ ಪಾಸು ಮಾಡಿದರು. 1990 ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಸರ್ಕಾರ ಪತನವಾಗಿ ಚಂದ್ರಶೇಖರ್ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಸರ್ಕಾರ ರಚನೆಯಾಗಿತ್ತು. ಇದನ್ನು ಗಮನಿಸಿದ ನಾಗೇಂದ್ರ ಬಾಬು ಕೈಯಲ್ಲಿ ಸುದರ್ಶನ ಚಕ್ರ ಹಿಡಿದು ತಿರುಗಿಸುತ್ತಿರುವ ರೀತಿಯ ವ್ಯಂಗ್ಯ ಚಿತ್ರ ಬರೆದು ಕಳುಹಿಸಿದರು. ಅದು ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದ ಇವರು ವ್ಯಂಗ್ಯಚಿತ್ರ ಯಾತ್ರೆ ಆರಂಭವಾಯಿತು.
ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರುವ ಬಾಬು, ನಾನು ವ್ಯಂಗ್ಯಚಿತ್ರಕಾರನಾಗಿರದಿದ್ದಲ್ಲಿ ಲೈನ್ ಮನ್ ಅಥವಾ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆಗಿರುತ್ದಿದ್ದೆ ಎನ್ನುತ್ತಾರೆ.
24 ರಂದು ಬಿಡುಗಡೆ
ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷ ವಿಆರ್ ಸಿ ಶೇಖರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್, ಕಾಳಿದಾಸ ರಸ್ತೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸಿಇಒ ಕೆ.ಆರ್. ಯೋಗಾನರಸಿಂಹನ್, ಯೋಗ ವಿತ್ ಶ್ರೀನಾಥ ಸಂಸ್ಥಾಪಕ ಶ್ರೀನಾಥ್ ಮುಖ್ಯ ಅತಿಥಿಗಳಾಗಿರುವರು.