)
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಳೇಕನಹಳ್ಳಿಯಲ್ಲಿರುವ ಐಐಎಂಬಿ ಕ್ಯಾಂಪಸ್ನಲ್ಲಿರುವ ಅಧ್ಯಾಪಕ ಅಮರ್ ಮನೆಯಲ್ಲಿ 2021ರಿಂದ ದಂಪತಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ತಾನು ಕೆಲಸಕ್ಕೆ ಸೇರಿದ ದಿನದಿಂದಲೂ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಅನಾರೋಗ್ಯ ವೇಳೆ ದೈಹಿಕವಾಗಿ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡಿದ್ದರು. ಕಳೆದ ಏ.15ರಂದು ದೈಹಿಕವಾಗಿ ಅಂಶು ಅವರು ತನ್ನ ಮೇಲೆ ಹಲ್ಲೆ ಮಾಡಿ, ಹೊರಗೆ ಹೋಗದಂತೆ ಕೂಡಿಹಾಕಿದ್ದರು ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.
ನೆರೆ ಹೊರೆಯವರು ಊಟ ನೀಡಿದರು:ಮೇ 4ರಂದು ಬೆಳಗ್ಗೆಯಿಂದ ಊಟ ನೀಡದ ಕಾರಣ ನೆರೆ-ಹೊರೆಯವರು ಊಟ ನೀಡಿದ್ದು, ನಗರದಲ್ಲಿ ವಾಸಿಸುತ್ತಿರುವ ತಮ್ಮ ಸಂಬಂಧಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ನಂತರ ತಮ್ಮ ಕುಕಿ ಸಮುದಾಯ ವಿದ್ಯಾರ್ಥಿ ನಾಯಕನಿಗೆ ವಿಷಯ ತಿಳಿಸಿದ್ದೇನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿತರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.