ಕನ್ನಡಪ್ರಭ ವಾರ್ತೆ ನವದೆಹಲಿ
ದೆಹಲಿಯ ಕೃಷಿ ಭವನದಲ್ಲಿ ಗುರುವಾರ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಈ ಸಂಬಂಧ ಭಾರತೀಯ ಸೇನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೌಷ್ಟಿಕ ಆಹಾರ ಪೂರೈಕೆ ಬಗ್ಗೆ ಚರ್ಚಿಸಿದರು.
ಸಶಸ್ತ್ರ ಪಡೆಗಳಿಗೆ ಗುಣಮಟ್ಟದ ಮತ್ತು ಸಾವಯವ ಪಡಿತರ ಆಹಾರ ಧಾನ್ಯ ಪೂರೈಸುವ ಬಗ್ಗೆ ಗಮನ ಹರಿಸಿದ ಸಚಿವರು, ‘ಭಾರತ್ ಬ್ರ್ಯಾಂಡ್’ ಅಕ್ಕಿ ಮತ್ತು ಗೋಧಿ ಉತ್ಪನ್ನ ಸರಬರಾಜು ಕುರಿತು ಮಹತ್ವದ ಚರ್ಚೆ ನಡೆಸಿದರು. ಅಕ್ಕಿ ಮತ್ತು ಗೋಧಿಯಂತಹ ಭಾರತ್ ಬ್ರ್ಯಾಂಡ್ ಉತ್ಪನ್ನಗಳ ಬಳಕೆ ಜತೆಗೆ ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿ ಸಂಗ್ರಹಣೆ ಸೇರಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಸ್ತುಗಳ ಖರೀದಿ ಕುರಿತು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.ಸಶಸ್ತ್ರ ಪಡೆಗಳಿಗೆ ಪರಿಣಾಮಕಾರಿಯಾಗಿ ಪೌಷ್ಟಿಕ ಆಹಾರ ಪೂರೈಕೆ ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸ್ಕೇಲಿಂಗ್ ಸಂಗ್ರಹಣೆ ಕುರಿತು ಸಚಿವರು ಮತ್ತು ಅಧಿಕಾರಿಗಳು ಸಮಾಲೋಚನೆ ನಡೆಸಿದರು.