ಕೇಂದ್ರ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಉತ್ಸುಕವಾಗಿದೆ. ಆಂಜನೇಯ ಹುಟ್ಟಿದ ಸ್ಥಳದ ಬಗ್ಗೆ ಗೊಂದಲ ಇದ್ದರೂ ಸಹ ಆಂಜನೇಯ ಹುಟ್ಟಿದ್ದಾನೆ ಎಂದು ಹೇಳಲ್ಪಡುವ ನಾಲ್ಕು ಸ್ಥಳಗಳು ಅಭಿವೃದ್ಧಿ ಆಗಬೇಕು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಹೇಳಿದರು.
ಗದಗ: ಕೇಂದ್ರ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಉತ್ಸುಕವಾಗಿದೆ. ಆಂಜನೇಯ ಹುಟ್ಟಿದ ಸ್ಥಳದ ಬಗ್ಗೆ ಗೊಂದಲ ಇದ್ದರೂ ಸಹ ಆಂಜನೇಯ ಹುಟ್ಟಿದ್ದಾನೆ ಎಂದು ಹೇಳಲ್ಪಡುವ ನಾಲ್ಕು ಸ್ಥಳಗಳು ಅಭಿವೃದ್ಧಿ ಆಗಬೇಕು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಹೇಳಿದರು.
ಅವರು ಸೋಮವಾರ ಸಂಜೆ ಗದಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಹಿಂದುಗಳು ಆ ನಾಲ್ಕು ಸ್ಥಳಗಳ ದರ್ಶನ ಪಡೆಯುವಂತಾಗಲಿ ಎಂದು ಆಶಿಸಿದ ಅವರು, ರಾಜ್ಯ ಸರ್ಕಾರವು ಅಂಜನಾದ್ರಿ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು. ಅಂತಾರಾಷ್ಟ್ರೀಯ ಹಿಂದು ಪರಿಷತ್ ಮತ್ತು ಬಜರಂಗ ದಳ, ಮಹಿಳಾ ಪರಿಷತ್, ಓಜಸ್ವಿನಿ ಸಂಘಟನೆ ಜತೆಗೂಡಿ ಕುಂಭ ಮೇಳದಲ್ಲಿ 1.5 ಕೋಟಿ ಜನರಿಗೆ ಊಟ ಮತ್ತು 5 ಸಾವಿರ ಜನರ ವಸತಿ ಕಲ್ಪಿಸಲಾಗಿತ್ತು. 1 ಲಕ್ಷ ಹೊದಿಕೆ, 200 ಟೆಂಟ್ ನಿರ್ಮಿಸಲಾಗಿತ್ತು. 25 ಸಾವಿರ ಜನರು ಏಕ ಕಾಲದಲ್ಲಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿತ್ತು. ಕೊರೋನಾ ಸಂದರ್ಭದಲ್ಲಿ ದೇಶದಲ್ಲಿ 5700 ಕ್ಕೂ ಅಧಿಕ ಊಟದ ಕೇಂದ್ರಗಳನ್ನು ನಮ್ಮ ಸಂಸ್ಥೆಗಳಿಂದ ತೆರೆಯಲಾಗಿತ್ತು. ಹಿಂದೂಗಳ ಸಹಾಯಕ್ಕಾಗಿ ಈಗ ಪ್ರತಿ ತಿಂಗಳು, ಅಕ್ಕಿ, ಗೋಧಿ ನೀಡಲು ತೀರ್ಮಾನಿಸಲಾಗಿದೆ. ಬಡ ಹಿಂದುಗಳು ಉಪವಾಸ ಬದುಕಬಾರದು ಎಂಬ ಉದ್ದೇಶದಿಂದ ಹೊಸ ಯೋಜನೆಗಳನ್ನು ತರಲಾಗುತ್ತಿದೆ. ಬಡ ಹಿಂದೂಗಳ ಸಹಾಯಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ಖಾಸಗಿ ವೈದ್ಯರ ಸೇವೆಯನ್ನು ಭಾರತೀಯ ಹಿಂದುಗಳಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.