ಕುಡುಂಬಶ್ರೀ ಮೂಲಕ ಸಿಎಫ್‌.ಟಿ.ಆರ್‌.ಐ ಉತ್ಪನ್ನ ಜಾಗತಿಕ ಮಾರುಕಟ್ಟೆಗೆ

KannadaprabhaNewsNetwork |  
Published : Jan 23, 2026, 01:15 AM IST
25 | Kannada Prabha

ಸಾರಾಂಶ

ದು ತಿಂಗಳ ಅಲ್ಪಾವಧಿಯಲ್ಲಿ ಸುಮಾರು 50 ಸಿ.ಎಫ್‌.ಟಿ.ಆರ್.ಐ ತಂತ್ರಜ್ಞಾನಗಳನ್ನು ಈಗಾಗಲೇ ಪ್ರದರ್ಶಿಸಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಸಿಎಸ್‌ಐಆರ್‌ - ಸಿಎಫ್‌.ಟಿ.ಆರ್‌.ಐ ನಾವೀನ್ಯತೆಗಳ್ನು ಕುಡುಂಬಶ್ರೀ ಮೂಲಕ ಜಾಗತಿಕ ಮಾರುಕಟ್ಟೆ ತಲುಪುತ್ತಿವೆ.

ಸಿಎಫ್‌.ಟಿ.ಆರ್‌.ಐ ಕುಟುಂಬಶ್ರೀಯೊಂದಿಗೆ 94 ತಂತ್ರಜ್ಞಾನ ವರಗಾವಣೆ ಒಪ್ಪಂದಗಳನ್ನು ಒಳಗೊಂಡ ಒಂದು ಹೆಗ್ಗುರುತು ಸಹಯೋಗ ಮಾಡಿಕೊಂಡಿದೆ.

ಇದು ಸಿ.ಎಫ್‌.ಟಿ.ಆರ್‌.ಐ ಗಾಗಿ ಅಂತಹ ಅತಿದೊಡ್ಡ ಒಪ್ಪಂದಗಳಲ್ಲಿ ಒಂದಾಗಿದ್ದು, ಕೇರಳದ ಪ್ರಮುಖ ಮಹಿಳಾ ನೇತೃತ್ವದ ಜೀವನೋಪಾಯ ಮಿಷನ್, ಮೌಲ್ಯವರ್ಧಿತ ಆಹಾರ ಉತ್ಪನ್ನಗಳು ಮತ್ತು ಉದ್ಯಮಶೀಲತೆಯಲ್ಲಿ ಬಲವಾದ ರಾಷ್ಟ್ರೀಯ ಮತ್ತು ಜಾಗತಿಕ ಆಟಗಾರನಾಗಿ ಹೊರ ಹೊಮ್ಮಿದೆ. ಈ ಸಹಯೋಗವು ವೈಜ್ಞಾನಿಕವಾಗಿ ಮೌಲ್ಯೀಕರಿಸಲ್ಪಟ್ಟ, ಸ್ಕೇಲೆಬಲ್‌ ಮತ್ತು ಮಾರುಕಟ್ಟೆಗೆ ಸಿದ್ಧವಾದ ಆಹಾರ ತಂತ್ರಜ್ಞಾನಗಳ ಮೂಲಕ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸವತ್ತ ಗಮನಹರಿಸುತ್ತದೆ.

ಐದು ತಿಂಗಳ ಅಲ್ಪಾವಧಿಯಲ್ಲಿ ಸುಮಾರು 50 ಸಿ.ಎಫ್‌.ಟಿ.ಆರ್.ಐ ತಂತ್ರಜ್ಞಾನಗಳನ್ನು ಈಗಾಗಲೇ ಪ್ರದರ್ಶಿಸಿದೆ. ಇದು ತ್ವಿರತ ಅನುಷ್ಠಾನ ಮತ್ತು ಪರಿಣಾಮಕಾರಿ ಸಮನ್ವಯವನ್ನು ಸಾಧಿಸಿದೆ.

ಉಳಿದ 44 ತಂತ್ರಜ್ಞಾನಗಳು ಮುಂದುವರಿದ ಹಂತಗಳಲ್ಲಿವೆ ಮತ್ತು ಶೀಘ್ರದಲ್ಲೇ ವರ್ಗಾವಣೆಗೊಂಡು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಪ್ರಮುಖ ಮೈಲಿಗಲ್ಲಾಗಿ, ಕುಟುಂಬಶ್ರೀ ಅಭಿವೃದ್ಧಿಪಡಿಸಿದ ಸುಮಾರು 12 ಸಿಎಫ್‌.ಟಿ.ಆರ್‌.ಐ ಆಧಾರಿತ ಆಹಾರ ಉತ್ಪನ್ನಗಳನ್ನು ಔಪಚಾರಿಕವಾಗಿ ಬಿಡುಗಡೆಗೊಳಿಸಲಾಗಿದೆ.

ಈ ಉತ್ಪನ್ನಗಳು ದೇಶೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಆದರೆ ಸಿಎಫ್‌.ಟಿ.ಆರ್‌.ಐ ಅಂತಾರಾಷ್ಟ್ರೀಯ ತಂತ್ರಜ್ಞಾನ ಹೆಜ್ಜೆ ಗುರುತನ್ನು ಗುರುತಿಸುವ ಮೂಲಕ ಗಲ್ಫ್‌ ಪ್ರದೇಶ ಸೇರಿದಂತೆ ಜಾಗಿತಕ ಮಾರುಕಟ್ಟೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.

ಈ ಜಾಗಿತಕ ಉಡಾವಣೆಯು ಸಿಎಸ್‌ಐಆರ್‌ - ಸಿಎಫ್‌.ಟಿ.ಆರ್‌.ಐ ಆಹಾರ ತಂತ್ರಜ್ಞಾನಗಳ ದೃಢತೆ, ನಿಯಂತ್ರಕ ಅನುಸರಣೆ ಮತ್ತು ರಫ್ತು ಸನ್ನದ್ಧತೆಯನ್ನು ಒತ್ತಿ ಹೇಳುತ್ತದೆ.

ಈ ಉತ್ಪನ್ನಗಳನ್ನು ಕೇರಳದ ಸ್ಥಳೀಯ ಸ್ವಯಂ ಸರ್ಕಾರ, ಅಬಕಾರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್‌ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ವಿಜ್ಞಾನ ನೇತೃತ್ವದ ನಾವೀನ್ಯತೆಯನ್ನು ತಳಮಟ್ಟದ ಉದ್ಯಮಶೀಲತೆಯೊಂದಿಗೆ ಸಂಪರ್ಕಿಸುವಲ್ಲಿ ಕೇರಳದ ನಾಯಕತ್ವವನ್ನು ಇದು ಎತ್ತಿ ತೋರಿಸುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುನಾವಣೆಯಲ್ಲಿ ಗೆಲುವಿಗೆ ಸಂಕಲ್ಪ ಮಾಡಿ
ಕೇಂದ್ರ ರಾಜಕಾರಣಕ್ಕೆ ರಾಜ್ಯಪಾಲರ ಬಳಕೆ: ರಾಮಲಿಂಗಾರೆಡ್ಡಿ ಆಕ್ರೋಶ