ಕನ್ನಡಪ್ರಭ ವಾರ್ತೆ ಬೆಂಗಳೂರು
ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಪ್ನ ಬುಕ್ ಹೌಸ್ ಹೊರತಂದಿರುವ ಪ್ರಾಧ್ಯಾಪಕ ಡಾ। ಸಿ.ಚಂದ್ರಪ್ಪ ಅವರ ‘ಅಶೋಕ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾ.ಕಸ್ತೂರಿ ಅವರ ಅಶೋಕನಿಗೆ ಸಂಬಂಧಿಸಿದ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯವು ಪ್ರಟಿಸಿತ್ತು. 45 ವರ್ಷದ ಹಿಂದೆ ಅದನ್ನು ಅಭ್ಯಾಸಿಸಿದ್ದೆ. ಆ ಕಾಲಕ್ಕೆ ಲಭ್ಯವಿದ್ದ ಮಾಹಿತಿಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಕೃತಿ ಹೊರತರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಅಶೋಕನ ಕುರಿತು ಬಿಡಿ ಬಿಡಿ ಬರಹಗಳು ಕನ್ನಡದಲ್ಲಿ ಹೊರಬಂದಿದ್ದವು. ಆದರೆ ಇದೀಗ ಚಂದ್ರಪ್ಪ ಅವರು ಮಹಾನ್ ಕೃತಿ ಹೊರತಂದಿದ್ದಾರೆ ಎಂದು ಪ್ರಶಂಸಿಸಿದರು.ಶ್ರದ್ಧೆ, ಭಕ್ತಿಯ ಯಾನ:
ವಿದ್ವಾಂಸ ಡಾ। ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಅಶೋಕನಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತದಲ್ಲಿ 13 ಶಾಸನಗಳು ಲಭಿಸಿದ್ದು, ಇದರಲ್ಲಿ 11 ಶಾಸನ ಕರ್ನಾಟಕದಲ್ಲಿ ಸಿಕ್ಕಿರುವುದು ವಿಶೇಷವಾಗಿದೆ. ಅಹಿಂಸೆ ಬೋಧಿಸಿದ ಅಶೋಕನ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ। ಎಂ.ಕೊಟ್ರೇಶ್, ಲೇಖಕ ಡಾ। ಸಿ.ಚಂದ್ರಪ್ಪ, ಸಪ್ನ ಬುಕ್ ಹೌಸ್ನ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಶಾ ಉಪಸ್ಥಿತರಿದ್ದರು.