ಸರಗಳ್ಳನ ಬಂಧನ, ಉಳಿದಿಬ್ಬರಿಗೆ ಶೋಧ

KannadaprabhaNewsNetwork |  
Published : Mar 18, 2025, 12:32 AM IST
17ಕೆಡಿವಿಜಿ5-ದಾವಣಗೆರೆ ತಾ. ಮಾಯಕೊಂಡ ಠಾಣೆ ವ್ಯಾಪ್ತಿಯ ಸರಗಳ್ಳತನ ಪ್ರಕರಣ ಬೇಧಿಸಿ, ಓರ್ವನನ್ನು ಬಂಧಿಸಿ, 2.80 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ, ಬೈಕ್ ಜಪ್ತು ಮಾಡಿರುವ ಮಾಯಕೊಂಡ-ಹದಡಿ ಪೊಲೀಸ್ ಅಧಿಕಾರಿ, ಸಿಬ್ಬಂದಿ. | Kannada Prabha

ಸಾರಾಂಶ

ದಾವಣಗೆರೆ: ಸರ ಕಳವು ಮಾಡಿದ್ದ ಮೂವರ ಪೈಕಿ ಓರ್ವನನ್ನು ಬಂಧಿಸಿ, ₹2 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ₹80 ಸಾವಿರ ಮೌಲ್ಯದ ಹೊಂಡಾ ಶೈನ್‌ ಬೈಕ್‌ ಸೇರಿದಂತೆ ₹2.80 ಲಕ್ಷ ಮೌಲ್ಯದ ಸ್ವತ್ತನ್ನು ತಾಲೂಕಿನ ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ: ಸರ ಕಳವು ಮಾಡಿದ್ದ ಮೂವರ ಪೈಕಿ ಓರ್ವನನ್ನು ಬಂಧಿಸಿ, ₹2 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ₹80 ಸಾವಿರ ಮೌಲ್ಯದ ಹೊಂಡಾ ಶೈನ್‌ ಬೈಕ್‌ ಸೇರಿದಂತೆ ₹2.80 ಲಕ್ಷ ಮೌಲ್ಯದ ಸ್ವತ್ತನ್ನು ತಾಲೂಕಿನ ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ ರಾಮನಗರದ ವಾಸಿ, ಆಟೋ ಚಾಲಕ ರವಿಕಿರಣ (27) ಬಂಧಿತ ಆರೋಪಿ. ವಡೇರಹಳ್ಳಿ ಯ ಸುಮಂಗಳಮ್ಮ ನಂದ್ಯಪ್ಪ (62) ಮಾ.12ರಂದು ಬೆಳಗ್ಗೆ 6.30ರ ವಾಕಿಂಗ್ ಹೋಗುವಾಗ ಕೊರಳಲ್ಲಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸಿದ್ದರು. ಈ ಬಗ್ಗೆ ಮಾಯಕೊಂಡ ಠಾಣೆಯಲ್ಲಿ ದೂರು ದಾಖಲಾಗಿತ್ತು.

ರವಿಕಿರಣನ ಸಹಚರರಾದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ಕೂಲಿ ಕೆಲಸಗಾರ ರಮೇಶ (47) ಹಾಗೂ ಹಮಾಲಿ ಕೆಲಸಗಾರ ಮನು ಅಲಿಯಾಸ್ ಮನೋಜ (23) ನಾಪತ್ತೆಯಾಗಿದ್ದು, ಇಬ್ಬರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ