ಧಾರವಾಡ:
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಗುಂದ ತಾಲೂಕಿನಾದ್ಯಂತ ಆ ಭಾಗದ ಶಾಸಕರು ಚಕ್ಕಡಿ ರಸ್ತೆ ಮಾಡಿಸುತ್ತಿದ್ದಾರೆ. ಇದರಲ್ಲೂ ಹಗರಣ ನಡೆದಿದೆ. ಪಾರದರ್ಶಕತೆಯನ್ನು ಗಾಳಿಗೆ ತೂರಿ ಅವರು ಕೆಲಸ ಮಾಡಿಸುತ್ತಿದ್ದಾರೆ. ಡಾಂಬರ್ ರಸ್ತೆ ತೆಗೆದು ಚಕ್ಕಡಿ ರಸ್ತೆ ಮಾಡಿಸುತ್ತಿದ್ದಾರೆ. ಮೋರ್ರಂ, ಮೆಟ್ಲಿಂಗ್ ಆದಮೇಲೆ ರಸ್ತೆ ಮಾಡಬೇಕು. ಆದರೆ ಅದು ಉಲ್ಟಾ ಆಗಿದೆ ಎಂದರು.
₹ 100 ಕೋಟಿ ಕೆಲಸಕ್ಕೆ ತಾವೇ ಅಡ್ವಾನ್ಸ್ ಕೊಟ್ಟಿರುವುದಾಗಿ ಶಾಸಕರು ಹೇಳುತ್ತಿದ್ದಾರೆ. ಈ ರೀತಿಯ ಯಾವುದೇ ಕಾಮಗಾರಿ ಪಡೆಯಲು ಒಪ್ಪಿಗೆ ಇಲ್ಲ. ಸರ್ಕಾರ ಯಾವ ಮಾನದಂಡದ ಮೇಲೆ ಇವರಿಗೆ ಒಪ್ಪಿಗೆ ನೀಡಿದೆಯೋ ಗೊತ್ತಿಲ್ಲ. ಈ ಶಾಸಕರು ₹ 100 ಕೋಟಿ ಕೆಲಸದಲ್ಲಿ ₹ 30 ಕೋಟಿ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಾರೆ. ಮುಂಗಡವಾಗಿಯೇ ಕೆಲಸ ಮಾಡಿದ್ದೇನೆ ಎಂದು ಇವರು ಹೇಳುತ್ತಾರೆ. ಈ ರೀತಿ ಹೇಳುವುದು ಕಾನೂನು ಬಾಹಿರ ಎಂದು ಹೇಳಿದರು.ಪಾರಂಪರಿಕವಾದ ಗುಡ್ಡವನ್ನು ಮುಟ್ಟಲು ಯಾರಿಗೂ ಆಗುವುದಿಲ್ಲ. ಆದರೆ, ಇವರು ಅಲ್ಲಿನ ಮಣ್ಣು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. 2007-08ರಲ್ಲಿ ಅಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಸರ್ಕಾರ ಇದಕ್ಕೆ ಒಂದು ಏಜೆನ್ಸಿ ಫಿಕ್ಸ್ ಮಾಡಿ ತನಿಖೆ ನಡೆಸಬೇಕು. ಡಿಸಿ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಗುಡ್ಡವನ್ನು ಯಾರೂ ಅಗೆಯಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.