ರಾಸಾಯನಿಕ ಬಿಟ್ಟರೆ ಕೃಷಿಯಲ್ಲಿ ಬದಲಾವಣೆ ಸಾಧ್ಯ: ವಿಶ್ವೇಶ್ವರ ಸಜ್ಜನ

KannadaprabhaNewsNetwork |  
Published : Nov 25, 2025, 02:30 AM IST
ಪೋಟೊ24.20: ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಗ್ರಾಮದೇವತೆ ದ್ಯಾಮಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದ್ಯಾಮಮ್ಮ ದೇವಿ ಮೂರ್ತಿಯ ಉತ್ಸವ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ದ್ಯಾಮಮ್ಮದೇವಿಯ ಜಾತ್ರಾ ಮಹೋತ್ಸವದ ಧಾರ್ಮಿಕ ಮತ್ತು ಕೃಷಿ ಚಿಂತನ ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ ಮಾರ್ಗದರ್ಶನ ನೀಡಿದರು.

ಕೊಪ್ಪಳ: ಕೃಷಿ ಚಟುವಟಿಕೆ ವಾಸ್ತವಾಗಿ ಬಹಳ ಸರಳವಾಗಿದೆ, ಆದರೆ ನಾವು ಅದನ್ನು ದೊಡ್ಡ ವಿಜ್ಞಾನವಾಗಿಸಲು ಹೊರಟಿದ್ದೇವೆ. ಯಾವಾಗ ನಾವು ರಾಸಾಯನಿಕ ಬಿಡುತ್ತೇವೆಯೋ ಆಗ ಬದಲಾವಣೆ ಬರುತ್ತದೆ ಎಂದು ಗಿಡ-ಮರ ಆಧಾರಿತ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ ಹೇಳಿದರು.

ತಾಲೂಕಿನ ಕಾತರಕಿ ಗ್ರಾಮದ ದ್ಯಾಮಮ್ಮದೇವಿಯ ಜಾತ್ರಾ ಮಹೋತ್ಸವದ ಧಾರ್ಮಿಕ ಮತ್ತು ಕೃಷಿ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಲೆನಾಡಲ್ಲಿ ಕೇವಲ 20ರಷ್ಟಿರುವ ಖಾಸಗಿ ಜಮೀನಿನಲ್ಲಿ ಬೆಳೆದ ಬೆಳೆ ಕಟಾವಿಗೆ ಉತ್ತರ ಕರ್ನಾಟಕ ಭಾಗದ ಶೇ. 80ರಷ್ಟು ಜನ ಕೂಲಿಗಾಗಿ ಗುಳೆ ಹೋಗುವುದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ ಎಂದರು.

ನಾನು ಹೊಸ ಕೃಷಿ ಪದ್ಧತಿ ಅಂದರೆ ಹಳೆಯದನ್ನು ಮತ್ತೆ ಪಾಲಿಸಿ ಕೆಲಸ ಕಡಿಮೆ ಮಾಡುವುದು. ಅಂದರೆ "ಮಾಡುವ ಬದಲು ಮಾಡದಿರುವ ಕಡೆಗೆ ಕೃಷಿ " ಎಂಬ ಘೋಷವಾಕ್ಯದೊಂದಿಗೆ ಸರ್ಕಾರದ ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ನಾವು ಕಾರ್ಪೊರೇಟ್‌ ಜಗತ್ತಿನ ಬಲೆಗೆ ಬಿದ್ದಿದ್ದೇವೆ. ನನ್ನ ಬೆಳೆ, ನನ್ನ ಬೆಲೆ ನನ್ನದೇ ಮಾರಾಟ ಎಂದು ಮಾಡಿಕೊಂಡಾಗ ನಿಶ್ಚಿತವಾಗಿ ಶ್ರೀಮಂತರಾಗುತ್ತೇವೆ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಸೋಮರಡ್ಡಿ ಅಳವಂಡಿ ಮಾತನಾಡಿ, ಜಗತ್ತು ಕೆಟ್ಟಿದೆ ಎಂದು ಭಾವಿಸಿದರೆ ಅದಕ್ಕೆ ಕಾರಣ ಕೇವಲ ಮನುಷ್ಯ ಮಾತ್ರ. ಈಗಲೂ ಪರಿಸರ, ಸೃಷ್ಟಿ, ಪಕ್ಷಿ ಪ್ರಾಣಿ ಪ್ರಪಂಚ ಅತ್ಯಂತ ನಿಷ್ಕಲ್ಮಶಲವಾಗಿ ಉಳಿದು, ಸಹಜವಾಗಿ ಬದುಕುತ್ತಿರುವುದರಿಂದ ಈಗಲೂ ಪ್ರಪಂಚ ಉಳಿದಿದೆ. ಅದೇ ಮನುಷ್ಯನ ರೀತಿ ಅವು ಆಗಿದ್ದರೆ ಇಂದು ಪ್ರಪಂಚವೇ ಎರಡು ಮೂರು ಬಾರಿ ಪ್ರಳಯ ಆಗಿರುತ್ತಿತ್ತು. ನಾವು ಆಧುನಿಕ ಜೀವನಶೈಲಿಗೆ ಬಿದ್ದು ಕೃಷಿಗೆ ಮತ್ತು ಬೆಳೆಗೆ ಬರೀ ರಾಸಾಯನಿಕ ಸಿಂಪರಣೆ ಮಾಡಿ ಬದುಕು, ಭೂಮಿ ಎರಡಕ್ಕೂ ವಿಷ ಹಾಕಿಕೊಂಡಿದ್ದೇವೆ ಎಂದರು.

ಮುಂಡರಗಿ ಅನ್ನದಾನೇಶ್ವರ ಮಠದ ನಾಡೋಜ ಅನ್ನದಾನ ಶ್ರೀಗಳು, ಅಮೃತಾನಂದ ಮಹಾಸ್ವಾಮಿಗಳು, ಚಿದಾನಂದ ಮಹಾಸ್ವಾಮಿಗಳು, ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚೈತನ್ಯಾನಂದ ಮಹಾಸ್ವಾಮಿಗಳು, ಶಿವರಾಮ ಕೃಷ್ಣಾನಂದರು, ಮೋಹನ್ ಪುರೋಹಿತ, ಗವಿಸಿದ್ದಯ್ಯ ಹಿರೇಮಠ,

ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್. ಹಿರೇಗೌಡ್ರ, ಡಾ. ಶ್ರೀನಿವಾಸ್ ಹ್ಯಾಟಿ, ರಾಬಕೊವಿ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಸುರೇಶ್ ಮಾದಿನೂರ್, ಶಂಕ್ರಯ್ಯ ಅಬ್ಬಿಗೇರಿಮಠ, ಅಶೋಕ್ ಬಳ್ಳಾರಿ, ಕೊಟ್ರಯ್ಯ ಅಬ್ಬಿಗೇರಿ, ಶಂಕ್ರಗೌಡ್ರ ಹಿರೇಗೌಡ್ರ, ಮಲ್ಲಣ್ಣ ಗುಗ್ರಿ, ಕೃಷ್ಣಪ್ಪ ಬಟಗೇರಿ, ಡಾ. ಸುರೇಶ ಹುರಕಡ್ಲಿ, ವಿಶ್ವನಾಥ ಕಂಪ್ಲಿ, ಮಂಜುನಾಥ ಮೇಟಿ, ನಾಗರಾಜ ಹುರಕಡ್ಲಿ, ಈಶ್ವರಗೌಡ್ರ ನಾಗನಗೌಡ್ರ, ಬಸವರಾಜ ಹಿರೇಮಠ, ಸುಭಾಸ ಬೈರಣ್ಣ, ಈಶಪ್ಪ ಹೊಳೆಯಪ್ಪನವರ, ನಾಯಕಪ್ಪ ತಳವಾರ, ತಿಪ್ಪಣ್ಣ ವಡ್ಡಿನ, ಸಿದ್ರಾಮಪ್ಪ ಗೊಶನಗೌಡ್ರ, ಜಗದೀಶ ಪೊಲೀಸ್‌ಪಾಟೀಲ್, ಬಸವರಾಜ ಹುಬ್ಬಳ್ಳಿ, ಯೋಗಾನಂದ ಹೊಳೆಯಪ್ಪನವರ, ವೆಂಕಪ್ಪ ಕೊರಗಲ್, ಸುರೇಶ ತಳವಾರ, ಗವಿಸಿದ್ಧಪ್ಪ ಅರಿಕೇರಿ, ಸಂಗಪ್ಪ ಕನಕಲ, ಯರಿಯಪ್ಪಗೌಡ, ರಾಜು ಬೈರಣ್ಣ, ಶಂಕ್ರಪ್ಪ ಹುರಕಡ್ಲಿ , ಸಂಜೀವರೆಡ್ಡಿ ಮೇಟಿ, ಯರಿಯಪ್ಪ ವಾಲಿ, ಮೈಲಪ್ಪ ದೇವರಮನಿ, ಮಲ್ಲಪ್ಪ ಮ್ಯಾಗಳಮನಿ ಇದ್ದರು.

ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಸದಾ ಸಂಚಾರ ಕಲಾತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಎರಡನೇ ದಿನ ಸೋಮವಾರ ಬೆಳಗ್ಗೆ ದ್ಯಾಮಮ್ಮ ದೇವಿ ಮೂರ್ತಿಯನ್ನು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೀಲುಕುದುರೆ ಗೊಂಬೆಗಳು, ಕರಡಿ ಮಜಲು, ಬಾಜಾ ಭಜಂತ್ರಿ, ಬ್ರಾಸ್ ಬ್ಯಾಂಡ್, ಡೊಳ್ಳು ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಮೆರವಣಿಗೆ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌