ಕನ್ನಡಪ್ರಭ ವಾರ್ತೆ ಮೈಸೂರು
ರಮ್ಮನಹಳ್ಳಿಯಲ್ಲಿರುವ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೋ- ಕಾನ್ಕ್ಲೇವ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದ್ದರಿಂದ ಪ್ರತಿಯೊಬ್ಬರೂ ಗುರಿ ಇಟ್ಟುಕೊಂಡು ಸಾಧನೆಗೆ ಕಠಿಣ ಶ್ರಮ ಪಡಬೇಕು ಎಂದು ಕರೆ ನೀಡಿದರು.
ಪ್ರತಿಭೆ ವಿಕಸನ, ಆಸೆ ಈಡೇರಿಗೆ, ಪರಸ್ವರ ಸ್ನೇಹ ವಿನಿಮಯ ಮತ್ತು ರಚನಾತ್ಮಕತೆಗೆ ಇಂತಹ ವೇದಿಕೆಗಳು ಅವಕಾಶ ಒದಗಿಸಿಕೊಡುತ್ತವೆ. ಇದನ್ನು ಸವಾಲಾಗಿ ಸ್ವೀಕರಿಸಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.ಜೋ- ಕಾನ್ಕ್ಲೇವ್ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ಮಾತನಾಡಿ, ಇಲ್ಲಿ ಪಠ್ಯಕ್ಕೆ ಸಂಬಂಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಉತ್ತಮವಾದುದು. ಇದರಿಂದ ವಿಷಯದಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಮಾನ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಕಂಪ್ಯೂಟರ್ಸೈನ್ಸ್ವಿಭಾಗದ ಮುಖ್ಯಸ್ಥೆ ಅವಂತಿ ಸ್ವಾಗತಿಸಿದರು. ಜೋ -ಕಾನ್ ಕ್ಲೇವ್ ಕಾಲೇಜು ಉತ್ಸವವನ್ನು ಕುರಿತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಚನಾ ಪ್ರದೀಪ್ ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪುಷ್ಪಾ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಎ.ಎಸ್. ಮಹೇಶ್ ಕಾರ್ಯಕ್ರಮ ನಿರೂಪಿಸಿದರು.ಜೋ- ಕಾನ್ ಕ್ಲೇವ್ -2025
ಐಟಿ ಆಕ್ಷನ್, ಮಾಸ್ಟರ್ ಮೈಂಡ್, ಪಿಕ್ಸೆಲ್ ಟು ಮಾಸ್ಟರ್ ಪೀಸ್ ಲೋಗೋಯನ್, ಫ್ಯೂಷನ್ ಮಾಸ್ಟರ್, ಕಾಮಿವುಡ್, ಡೈಲಾಗ್ ಡೈವ್, ಪರ್ಸನಗ್ಗಿಯೊ, ಪ್ರಶ್ನೋತ್ತರ ರಸಾಯನ, ವಾಕ್ ಚಾತುರ್ಯ ಸ್ಪರ್ಧೆಗಳನ್ನು ಕಾಲೇಜಿನ ವಾಣಿಜ್ಯ ವಿಭಾಗ, ಗಣಕ ವಿಜ್ಞಾನ ವಿಭಾಗ, ಆಂಗ್ಲ ಭಾಷಾ ವಿಭಾಗ, ಕನ್ನಡ ವಿಭಾಗ ಮತ್ತು ಹಿಂದಿ ವಿಭಾಗಗಳು ಹಮ್ಮಿಕೊಂಡಿದ್ದವು. ಕಾಲೇಜಿನ ಆಸಿಯಾ ಸುಲ್ತಾನ ಅವರ ರಚಿಸಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಕೂಡ ಇತ್ತು.