ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು

KannadaprabhaNewsNetwork |  
Published : Dec 23, 2025, 03:15 AM IST
21ಬಿಎಸ್ವಿ02- ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದಲ್ಲಿ ಲಿಂ.ಚನ್ನಬಸವ ಸ್ವಾಮೀಜಿಯವ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾಮಠದ ಶರಣರು ಮಾತನಾಡಿದರು. | Kannada Prabha

ಸಾರಾಂಶ

ಇಂಗಳೇಶ್ವರ ವಿರಕ್ತಮಠದ ಹಿರಿಯ ಶ್ರೀ, ವಚನ ಶಿಲಾ ಮಂಟಪದ ನಿರ್ಮಾತೃ ಲಿಂ.ಚನ್ನಬಸವ ಸ್ವಾಮೀಜಿಯವರು ಭವರೋಗ ವೈದ್ಯರಾಗಿದ್ದರು. ಇವರು ಇಡೀ ಮನುಕುಲವನ್ನೇ ಪ್ರೀತಿಸುವ ಗುಣ ಹೊಂದಿದ್ದರು ಎಂದು ಚಿತ್ರದುರ್ಗದ ಬೃಹನ್ಮಠದ ಮುರುಘಾಶರಣರು ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಇಂಗಳೇಶ್ವರ ವಿರಕ್ತಮಠದ ಹಿರಿಯ ಶ್ರೀ, ವಚನ ಶಿಲಾ ಮಂಟಪದ ನಿರ್ಮಾತೃ ಲಿಂ.ಚನ್ನಬಸವ ಸ್ವಾಮೀಜಿಯವರು ಭವರೋಗ ವೈದ್ಯರಾಗಿದ್ದರು. ಇವರು ಇಡೀ ಮನುಕುಲವನ್ನೇ ಪ್ರೀತಿಸುವ ಗುಣ ಹೊಂದಿದ್ದರು ಎಂದು ಚಿತ್ರದುರ್ಗದ ಬೃಹನ್ಮಠದ ಮುರುಘಾಶರಣರು ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಆವರಣದಲ್ಲಿ ಭಾನುವಾರ ನಡೆದ ಲಿಂ.ಚನ್ನಬಸವ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ನುಡಿನಮನ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು. ಸ್ವಾಮೀಜಿಗಳು ತಮ್ಮಲ್ಲಿರುವ ಜ್ಞಾನವನ್ನು ಯಾವುದೇ ಜಾತಿ-ಭೇದ, ಬಡವ-ಶ್ರೀಮಂತ ಅನ್ನದೇ ಎಲ್ಲರಿಗೂ ಹಂಚುವ ಸ್ವಭಾವ ಹೊಂದಿದ್ದರು. ಜಗತ್ತಿನ ಹಿತಕ್ಕಾಗೆ ಬದುಕಿದ ಶ್ರೀಗಳಾಗಿದ್ದರು. ಅವರು ಭಕ್ತರ ಉದ್ದಾರಕ್ಕಾಗಿ ಸದಾ ಪಾದಯಾತ್ರೆ ಮಾಡುವ ಸ್ವಭಾವ ಹೊಂದಿದ್ದರು. ಇಡೀ ಭಾರತವನ್ನು ಪಾದಯಾತ್ರೆ ಮೂಲಕ ಸಂಚಾರ ಮಾಡಿದ ಅಪರೂಪದ ಶ್ರೀಗಳು ಇವರಾಗಿದ್ದಾರೆ ಎಂದು ಸ್ಮರಿಸಿದರು.

ಬಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದದೇವರು ಮಾತನಾಡಿ, ದಾಸೋಹಕ್ಕೆ ಇನ್ನೊಂದು ಹೆಸರಾಗಿದ್ದ ಚನ್ನಬಸವ ಸ್ವಾಮಿಗಳು, ದಾಸೋಹ ಹಾಗೂ ಜ್ಞಾನದಾಸೋಹವನ್ನು ಕೊಟ್ಟ ಕರ್ನಾಟಕದ ಕರ್ನಾಟಕದ ಕೆಲವೇ ಮಠಾಧೀಶರಲ್ಲಿ ಇವರು ಪ್ರಮುಖರಾಗಿದ್ದರು ಎಂದು ಹೇಳಿದರು. ಅಷ್ಟಾವರಣ ಹಾಗೂ ಪಂಚಾಚಾರ್ಯಗಳನ್ನು ಚೆನ್ನಾಗಿ ತಿಳಿದವರಾಗಿದ್ದ ಅವರು ಬದುಕಿನುದ್ದಕ್ಕೂ ಶರಣರ ವಚನಗಳನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸಿದರು. ನಡೆ-ನುಡಿ ಒಂದಾಗಿದ್ದ ಅಪರೂಪದ ಮಠಾಧೀಶರು ಅವರಾಗಿದ್ದರು. ಅವರು ನೀಡಿರುವ ಮಾರ್ಗದರ್ಶನದಲ್ಲಿ ಈಗಿರುವ ಮಠಾಧೀಶರು ನಡೆಯುವಂತಾಗಬೇಕೆಂದರು.

ಸಿಂದಗಿಯ ಡಾ.ಪ್ರಭುಸಾರಂಗ ಶಿವಾಚಾರ್ಯರು ಸ್ವಾಮೀಜಿ ಮಾತನಾಡಿ, ಲಿಂ.ಚನ್ನಬಸವ ಸ್ವಾಮೀಜಿಯವರು ಸೇವೆ ಮಾಡುವುದು ಅವರ ಮೊದಲ ಕರ್ತವ್ಯವಾಗಿತ್ತು. ಎಲ್ಲರನ್ನೂ ಸೇವೆಗೆ ಹಚ್ಚುವ ಕೆಲಸದಲ್ಲಿ ಅವರು ಮೊದಲಿಗರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರಷ್ಟು ಮಾತೃ ಹೃದಯ ಸ್ವಾಮಿಗಳನ್ನು ನಾಡು ಕಂಡಿಲ್ಲ ಎಂದರು. ಶ್ರೀಮಠದ ಕಿರಿಯ ಸ್ವಾಮೀಜಿ ಡಾ.ಸಿದ್ದಲಿಂಗ ಸ್ವಾಮೀಜಿ ಹಿರಿಯ ಶ್ರೀಗಳ ಕುರಿತು ಭಾವುಕರಾಗಿ, ಶ್ರೀಗಳು ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ಮಾನಸಿಕವಾಗಿ ನಮ್ಮೊಂದಿಗೆ ಸದಾ ಇದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತಾಗಬೇಕಿದೆ ಎಂದರು.

ಸೊನ್ನದಶ್ರೀಗಳು, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ಶಿರಸಿಶ್ರೀಗಳು, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ವಡವಡಗಿಯ ನಂದಿಮಠಶ್ರೀಗಳು, ಹರಸೂರಿನ ಶ್ರೀಗಳು, ಪಡೇಕನೂರ ಶ್ರೀಗಳು, ಅಥರ್ಗಾದ ಶ್ರೀಗಳು, ಅಥಣಿಯ ಶೆಟ್ಟರ್ ಮಠದ ಶ್ರೀಗಳು, ವಿಜಯಪುರ ಸಿದ್ದಲಿಂಗ ದೇವರು, ಸೋಲಾಪುರಶ್ರೀಗಳು, ಗುಣಸಾಗರಿನ ಸಂಗನಬಸವ ದೇವರು, ಕರಬಂಟನಾಳದಶ್ರೀಗಳು ಸೇರಿದಂತೆ ಅನೇಕ ಶ್ರೀಗಳು ನುಡಿನಮನ ಸಲ್ಲಿಸಿದರು. ಕೊಲ್ಹಾರದ ಕಲ್ಲಿನಾಥ ದೇವರು, ಮರೆಗುದ್ದಿ ಸ್ವಾಮೀಜಿ, ಶಿರಸಿ ಶಿವಲಿಂಗ ಸ್ವಾಮೀಜಿ, ಬಣ್ಣದ ಮಠದಶ್ರೀಗಳು, ಪರಪ್ಪ ಜತ್ತಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ ಸೇರಿದಂತೆ ನೂರಕ್ಕೂ ಹೆಚ್ಚಿನ ಶ್ರೀಗಳು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಲಿಂ.ಚನ್ನಬಸವ ಸ್ವಾಮೀಜಿಯವರ ಕರ್ತುೃ ಗದ್ದುಗೆಗೆ ಶ್ರೀಗಳ ಸಮ್ಮುಖದಲ್ಲಿ ಅಭಿಷೇಕ, ಪೂಜೆ ನಡೆಯಿತು. ಭಕ್ತರಿಗೆ ಲಿಂ.ಚನ್ನಬಸವ ಸ್ವಾಮೀಜಿಯವರು ಶ್ರೀಮಠಕ್ಕೆ ಆಗಮಿಸುವ ಭಕ್ತರಿಗೆ ನೀಡುತ್ತಿದ್ದ ಸಜ್ಜಕ-ತುಪ್ಪ, ಅನ್ನ-ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆರು ಕ್ವಿಂಟಲ್ ಸಜ್ಜಕ, ಮೂರುವರೆ ಕ್ವಿಂಟಲ್ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುತ್ತಿರುವ ಪ್ರಶಂಸಾರ್ಹ: ಎಂ.ಎನ್.ಪಾಟೀಲ
ರಪ್ತು ಮಾಹಿತಿ ಕೇಂದ್ರ ತೆರಯಲು ಸಚಿವ ತಿಮ್ಮಾಪೂರ ಸಲಹೆ