ಬೇಲೂರು : ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ಶ್ರೀ ಚನ್ನಕೇಶವ ಸ್ವಾಮಿ ಆಭರಣಗಳು

KannadaprabhaNewsNetwork |  
Published : Mar 30, 2025, 03:01 AM ISTUpdated : Mar 30, 2025, 10:09 AM IST
29ಎಚ್ಎಸ್ಎನ್‌6 : ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಶ್ರೀ ಚನ್ನಕೇಶವ ಸ್ವಾಮಿಗೆ ಧರಿಸುವ ಚಿನ್ನಾಭರಣಗಳನ್ನು ಭಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ತರಲಾಯಿತು. | Kannada Prabha

ಸಾರಾಂಶ

ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಧರಿಸುವ ಚಿನ್ನಾಭರಣಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ತರಲಾಯಿತು.

  ಬೇಲೂರು :  ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಧರಿಸುವ ಚಿನ್ನಾಭರಣಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ತರಲಾಯಿತು.

ತಹಸೀಲ್ದಾರ್ ಉಪಖಜಾನೆಯಲ್ಲಿಟ್ಟಿದ್ದ ಶ್ರೀ ಚನ್ನಕೇಶವ ಸ್ವಾಮಿಯ ಚಿನ್ನಾಭರಣ, ಶ್ರೀದೇವಿ ಹಾಗೂ ಭೂದೇವಿ ಆಭರಣಗಳಿದ್ದ ಪೆಟ್ಟಿಗೆಗೆ ತಹಸೀಲ್ದಾರ್ ಎಂ. ಮಮತಾ, ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ , ದೇವಾಲಯದ ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್ ಹಾಗೂ ನರಸಿಂಹಪ್ರಿಯಭಟ್ ರವರು ಪೂಜೆ ಸಲ್ಲಿಸಿದ ನಂತರ ಪೊಲೀಸ್ ಠಾಣೆಯಿಂದ ಬಿಗಿಭದ್ರತೆಯೊಂದಿಗೆ ಸ್ವಾಮಿ ದೇಗುಲಕ್ಕೆ ಪಲ್ಲಕ್ಕಿಯಲ್ಲಿ ತರಲಾಯಿತು.

ನಂತರ ದೇಗುಲದ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಳಾ ನೇತೃತ್ವದಲ್ಲಿ ಒಡವೆಗಳನ್ನು ಪರೀಕ್ಷಿಸಿದ ನಂತರ ದೇಗುಲದ ಸುಪರ್ದಿಗೆ ಇಡಲಾಯಿತು. ಯುಗಾದಿ ಹಬ್ಬದಂದು ಚನ್ನಕೇಶವ ಸ್ವಾಮಿ ಆಲಯಶುದ್ಧಿ, ಪಂಚಾಮೃತಾಭಿಷೇಕ ಸೇರಿದಂತೆ ಯುಗಾದಿ ಹಬ್ಬದ ದಿನದಂದು ಎಲ್ಲಾ ಬಂಗಾರದ ಒಡವೆಗಳನ್ನು ಸ್ವಾಮಿಗೆ ಅಲಂಕರಿಸಲಾಗುತ್ತದೆ.

 ನಂತರ ಸುಮಾರು 20 ದಿನಗಳ ಕಾಲ ಎಲ್ಲಾ ಒಡವೆಗಳನ್ನು ದೇವಾಲಯದಲ್ಲಿ ಶ್ರೀಯವರಿಗೆ ತೊಡಸಲಾಗುವುದು. ಏ. 2 ರಿಂದ 15 ರವರೆಗೆ ವಿವಿಧ ಉತ್ಸವಗಳು ನಡೆಯಲಿವೆ, ಏ. 10 ಹಾಗೂ 11 ರಂದು ನಡೆಯುವ ನಾಡ ರಥೋತ್ಸವ ಜರುಗಲಿದ್ದು, ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇಗುಲದ ಆಡಳಿತಾಧಿಕಾರಿ ಕೆ.ಟಿ. ಶಾಂತಳಾ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ