ಚೆನ್ನಮ್ಮ ದೇಶದ ಮೊದಲ ಹೋರಾಟಗಾರ್ತಿ

KannadaprabhaNewsNetwork |  
Published : Oct 24, 2024, 12:47 AM IST
ಮುಂಡರಗಿಯಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ್ದ ವೀರರಾಣಿ ಕಿತ್ತೂರ ಚೆನ್ನಮ್ಮಾಜಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ ಎರ್ರಿಸ್ವಾಮಿ ಚೆನ್ನಮ್ಮ ಪುತ್ತಳ್ಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಕಿತ್ತೂರು ಸಂಸ್ಥಾನದ ಮೇಲೆ ದಂಡೆತ್ತಿ ಬಂದಾಗ ದಿಟ್ಟತನದಿಂದ ಹೋರಾಡಿದ ಚೆನ್ನಮ್ಮ ಬ್ರಿಟೀಷರನ್ನು ದೇಶಬಿಟ್ಟು ತೊಲಗಿಸಿದ್ದರು

ಮುಂಡರಗಿ: ಬ್ರಿಟೀಷರ ವಿರುದ್ಧ ಹೋರಾಟ ಮಾಡುವ ಮೂಲಕ ದೇಶ ಬಿಟ್ಟು ಓಡುವಂತೆ ಮಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಮುಂಡರಗಿ ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಅವರು ಬುಧವಾರ ಮುಂಡರಗಿಯಲ್ಲಿ ತಾಲೂಕು ಪಂಚಮಸಾಲಿ ಸಮಾಜ ಯುವ ಘಟಕ ಮತ್ತು ಶಹರ ಘಟಕದ ಸಂಯುಕ್ತಾಶ್ರಯದಲ್ಲಿ ಜರುಗಿದ ವೀರರಾಣಿ ಕಿತ್ತೂರು ಚೆನ್ನಮ್ಮನ 246ನೇ ಜಯಂತ್ಯುತ್ಸವ ಹಾಗೂ 200ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚೆನ್ನಮ್ಮ ಪುತ್ತಳಿಗೆ ಹೂಮಾಲೆ ಹಾಕಿ ಮಾತನಾಡಿದರು.

ಸಾಕಷ್ಟು ರಾಜಮನೆತನಗಳ ವಿರುದ್ಧ ಬ್ರಿಟೀಷರು ಹೋರಾಟ ಮಾಡಿ ಅವರ ರಾಜ್ಯ ವಶಪಡಿಸಿಕೊಂಡು ಅವರನ್ನು ಶರಣಾಗತಿ ಮಾಡಿಕೊಂಡಿದ್ದರು. ಕಿತ್ತೂರು ಸಂಸ್ಥಾನದ ಮೇಲೆ ದಂಡೆತ್ತಿ ಬಂದಾಗ ದಿಟ್ಟತನದಿಂದ ಹೋರಾಡಿದ ಚೆನ್ನಮ್ಮ ಬ್ರಿಟೀಷರನ್ನು ದೇಶಬಿಟ್ಟು ತೊಲಗಿಸಿದ್ದರು. ಇವರ ಸಾಧನೆ ಗೌರವಿಸುವ ಉದ್ದೇಶದಿಂದ ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇವರ ಜಯಂತ್ಯುತ್ಸವ ಆಚರಿಸುವಂತೆ ಆದೇಶಿಸಿದೆ. ಚೆನ್ನಮ್ಮನವರು ನಾಡಿನ ನೆಲ, ಜಲ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇಂದು ಕಿತ್ತೂರಿನಲ್ಲಿ ಜರುಗುವ ಸರ್ಕಾರದ ಕಾರ್ಯಕ್ರಮದಲ್ಲಿ ಅವರ ಹೆಸರಿನ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತಿದೆ. ಇಂದಿನ ಮಹಿಳೆಯರು ಅವರ ತತ್ವಾದರ್ಶ, ಧೈರ್ಯವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಚೆನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗೂ ಬಿಲ್ಲು ವಿದ್ಯೆ ಕರಗತ ಮಾಡಿಕೊಂಡಿದ್ದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ತನ್ನ ದತ್ತು ಮೊಮ್ಮಗನಿಗೆ ಪಟ್ಟ ಕಟ್ಟಿದಳು. ಅವರ ಧೈರ್ಯ ಮತ್ತು ಸಾಹಸ ಎಲ್ಲರೂ ಮೆಚ್ಚುವಂತದ್ದು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ, ಪ್ರೊ.ಎ.ವೈ.ನವಲಗುಂದ ಸೇರಿದಂತೆ ಅನೇಕರು ಮಾತನಾಡಿದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಕರಬಸಪ್ಪ ಹಂಚಿನಾಳ, ದೇವಪ್ಪ ರಾಮೇನಹಳ್ಳಿ, ಹೇಮಂತಗೌಡ ಪಾಟೀಲ, ಚಿನ್ನಪ್ಪ ವಡ್ಡಟ್ಟಿ, ಎಸ್.ವಿ. ಪಾಟೀಲ, ನಾಗರಾಜ ಹೊಂಬಳಗಟ್ಟಿ, ಅನ್ನಪೂರ್ಣಾ ದೇಸಾಯಿ, ಶೊಭಾ ಹೊಟ್ಟೀನ, ರಜನೀಕಾಂತ ದೇಸಾಯಿ, ಷಡಕ್ಷರಯ್ಯ ಅಳವಂಡಿಮಠ, ವಿರೇಶ ಹಡಗಲಿ, ಶಿದ್ದಲಿಂಗಪ್ಪ ದೇಸಾಯಿ, ವೀಣಾ ಪಾಟೀಲ, ಸೋಮಶೇಖರ ಹಕ್ಕಂಡಿ, ಮುತ್ತು ಅಳವಂಡಿ,‌ ಆರ್.ಎಲ್. ಪೊಲೀಸ್ ಪಾಟೀಲ, ವೀರನಗೌಡ ಗುಡದಪ್ಪನವರ, ಅಶೋಕ ಹಂದ್ರಾಳ, ಎಚ್.ಡಿ. ಪೂಜಾರ, ಮಂಜು ಮುಧೋಳ, ರೇಖಾ ದೇಸಾಯಿ, ರವೀಂದ್ರಗೌಡ ಪಾಟೀಲ, ಬಸವರಾಜ ನವಲಗುಂದ, ಗಂಗಾಧರ ಅಣ್ಣೀಗೇರಿ, ವಿಜಯಕುಮಾರ ಬೆಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಮೇಶಗೌಡ ಪಾಟೀಲ ಸ್ವಾಗತಿಸಿ, ಮಂಜುನಾಥ ಇಟಗಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!