ಗ್ರಾಮ ಪಂಚಾಯಿತಿಗಳಿಗೆ ಅಭಿನಂದಿಸುವ ಕಾರ್ಯಕ್ರಮ
ಈ ಬೇಸಿಗೆಯಲ್ಲಿ ಹೆಚ್ಚಿನ ಮಕ್ಕಳು ಮೊಬೈಲ್, ಟಿ.ವಿ.ಗಳಿಂದ ದೂರವಿದ್ದು ಬೇಸಿಗೆ ಬೆಸುಗೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಂದು ತಾ.ಪಂ. ಇಓ ಎಚ್.ಡಿ.ನವೀನ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ಬೇಸಿಗೆ ಬೆಸುಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಗ್ರಾಪಂಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಪನೆಯಂತೆ ಬೇಸಿಗೆ ಬೆಸುಗೆ ಶಿಬಿರ ಅತ್ಯಂತ ಯಶಸ್ಸಿಯಾಗಿದೆ. ಶಿಬಿರ ಗ್ರಾಮೀಣ ಭಾಗದ ಮಕ್ಕಳಿಗೆ ತುಂಬಾ ಅನುಕೂಲ. ಈ ಬಾರಿ ಅತ್ಯಂತ ಯಶಸ್ವಿಯಾಗಿ ಬೇಸಿಗೆ ಬೆಸುಗೆ ಶಿಬಿರ ಆಯೋಜಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಜಿ.ಪಂಚಾಯಿತಿಯ ಮಾನದಂಡಗಳ ಆಧಾರದ ಮೇಲೆ ನೀಡಲಾಗಿದೆ.ಈ ಬಾರಿ ಮೂರು ಸ್ಥಾನ ಪಡೆದ ಗ್ರಾ.ಪಂಗಳು ಶಿಬಿರದಲ್ಲಿ ಆಯೋಜಿಸಿದ್ದ ವಿಶೇಷ ಚಟುವಟಿಕೆಗಳ ಸಂಪೂರ್ಣ ಛಾಯಾ ಚಿತ್ರ, ವೀಡಿಯೋಗಳನ್ನು ಜಿಲ್ಲಾ ಮಟ್ಟಕ್ಕೆ ಸಲ್ಲಿಸಲಾಗುವುದು. ಗ್ರಾ.ಪಂ. ಪಿಡಿಓ, ಗ್ರಂಥಾಲಯಗಳ ಮೇಲ್ವಿಚಾರಕರ ಸಹಕಾರದಿಂದ ಈ ಬಾರಿ ಶಿಬಿರ ಅತ್ಯಂತ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಶಿಬಿರ ಆಯೋಜಿಸಲಾಗುವುದೆಂದರು. ಇದೇ ಸಂದರ್ಭದಲ್ಲಿ ಬೇಸಿಗೆ ಬೆಸುಗೆ ಶಿಬಿರ ಅತ್ಯುತ್ತಮವಾಗಿ ಆಯೋಜಿಸಿದ್ದ ಕರ್ಕೇಶ್ವರ ಗ್ರಾಪಂ ಪ್ರಥಮ ಸ್ಥಾನ, ಬಿ.ಕಣಬೂರು ತೃತೀಯ ಸ್ಥಾನ ಹಾಗೂ ಆಡುವಳ್ಳಿ ಗ್ರಾ.ಪಂ. ತೃತೀಯ ಸ್ಥಾನ ಪಡೆದವು. ಮೂರು ಗ್ರಾ.ಪಂ.ಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಉಳಿದ ಗ್ರಾ.ಪಂ.ಗಳಿಗೂ ಕೂಡ ಪ್ರಶಂಸನಾ ಪತ್ರ ವಿತರಿಸ ಲಾಯಿತು. ವಿವಿಧ ಗ್ರಾ.ಪಂ.ಗಳ ಪಿಡಿಓ ಹಾಗೂ ಗ್ರಂಥಾಲಯದ ಮೇಲ್ವಿಚಾರಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಾಲೂಕು ಯೋಜನಾ ಅಧಿಕಾರಿ ಯಾಧವರಾಜ್, ಸಹಾಯಕ ನಿರ್ದೇಶಕರಾದ ಎನ್.ಎಲ್.ಮನೀಶ, ಮಂಜುಳ, ತಾಲೂಕಿನ ಎಲ್ಲಾ ಗ್ರಾ.ಪಂಚಾಯ್ತಿ ಪಿಡಿಒ ಹಾಗೂ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.