ಧಾರವಾಡ:
ಸಾಮಾಜಿಕ ಅರಣ್ಯ ಇಲಾಖೆ ಹಾಗೂ ರಂಗಾಯಣ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಿದ್ದ ತಿಂಗಳ ಹಕ್ಕಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರವನ್ನು ಸಮತೋಲನದಲ್ಲಿ ಇಡಲು ಪಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ವಿದ್ಯುತ್ ತಂತಿ, ಮೊಬೈಲ್ ಟವರ್, ಪರಿಸರ ಮಾಲಿನ್ಯ, ಬೇಟೆಯಾಡುವುದು, ಮರ ಕಡಿಯುವುರಿಂದ ಪಕ್ಷಿಗಳಿಗೆ ಜೀವಿಸಲು ತೊಂದರೆಯಾಗುತ್ತಿದೆ. ಪಕ್ಷಿಗಳು ಮನುಷ್ಯನಂತೆಯೇ ಜೀವಿಸುವ ಪಕ್ಷಿಗಳ ವಿಶೇಷತೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗುತ್ತಿದೆ. ಆದ್ದರಿಂದ ಮಕ್ಕಳು ಪ್ರಾಣಿ-ಪಕ್ಷಿಗಳ ಕುರಿತು ಮಾಹಿತಿ ಪಡೆದು ಅವುಗಳನ್ನು ಉಳಿಸಿ, ಜೀವಿಸಲು ಸಹಾಯ ಮಾಡಬೇಕೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಪರಿಸರದಲ್ಲಿ ಒಂದಕ್ಕೊಂದು ಸಂಬಂಧ ಹೊಂದಿದ ಜೀವ ವೈವಿಧ್ಯತೆಯ ಸರಪಳಿ ವ್ಯವಸ್ಥೆ ಇದ್ದು ತಮ್ಮ ಅನುಕೂಲಕ್ಕಾಗಿ ಮನುಷ್ಯ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಆದರೆ, ಪ್ರಾಣಿ-ಪಕ್ಷಿಗಳು ಪರಿಸರವನ್ನು ಸಂರಕ್ಷಣೆ ಮಾಡುತ್ತವೆ. ಆದ್ದರಿಂದ ಪಕ್ಷಿಗಳ ಕುರಿತು ತಿಳಿದುಕೊಂಡು ಅವುಗಳಿಗೆ ಹಾನಿ ಮಾಡದೆ ಅವುಗಳಿಗೆ ಸಿಗಬೇಕಾದ ಮೂಲಭೂತ ಆಹಾರ, ನೀರು ಹಾಗೂ ಪ್ರೀತಿ ನೀಡಿದರೆ, ಅವು ನಮಗೆ ಪ್ರತಿನಿತ್ಯ ಕೃತಜ್ಞತೆ ಸಲ್ಲಿಸುತ್ತವೆ ಎಂದರು.