ಕೊಪ್ಪಳ: ಮಕ್ಕಳಲ್ಲಿ ಜಾಗೃತಿ ಹಾಗೂ ವ್ಯವಹಾರಿಕ ಜ್ಞಾನ ಮೂಡಿಸಲು ನಮ್ಮ ಮೂಲ ಕಸಬು ನೆನಪಿಸಲು ಮಕ್ಕಳಿಗಾಗಿ ಜರುಗುವ ಚಿಣ್ಣರ ಮೇಳಗಳು ಸಹಕಾರಿಯಾಗಲಿವೆ ಎಂದು ಶಿಕ್ಷಣ ಸಂಯೋಜಕ ವೀರೇಶ ಅರಳಿಕಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಶಿಕ್ಷಣ ಸಂಯೋಜಕ ಲಕ್ಷಣ ಪಲ್ಲೇದ ಮಾತನಾಡಿ, ಸರ್ಕಾರಿ ಶಾಲೆಯಂತೆ ಇಲ್ಲಿಯೂ ಸಹ ವಿವಿಧ ಚಟುವಟಿಕೆ ಮಾಡುತ್ತಿರುವುದು ಮಕ್ಕಳ ಕಲಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಶಿಕ್ಷಣ ಸಂಯೋಜಕ ಯಲ್ಲಪ್ಪ ಬೆನಟ್ಟಿ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ಪಾಲಕರ ಮುತುವರ್ಜಿಯಿಂದ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಪಾನಿಪುರಿ, ಬೆಳೆಕಾಳು, ಸಿಹಿತಿನಿಸು ಸೇರಿದಂತೆ ವಿವಿಧ ಪದಾರ್ಥಗಳು ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು. ನಿವೇದಿತಾ ಶಾಲೆಯ ನೀತೇಶ ಪುಲಸ್ಕರ, ಬೇಂದ್ರೆ ಶಾಲೆಯ ಸಂತೋಷ ದೇಶಪಾಂಡೆ, ಮಾಸ್ತಿ ಶಾಲೆಯ ಹುಲಗಪ್ಪ ಕಟ್ಟಿಮನಿ, ಗ್ಲೋಬಲ್ ಶಾಲೆಯ ಬಸವರಾಜ ಎಸ್.ಎಸ್., ಕಿಯೋನಿಕ್ಸ್ ಕಂಪ್ಯೂಟರ್ನ ಮಂಜುನಾಥ ಉಲ್ಲತ್ತಿ, ಉದ್ಯಮಿಗಳಾದ ಮಂಜುನಾಥ ಅಂಗಡಿ, ಶರಣು ಡೊಳ್ಳಿನ, ಅಶೋಕ ಕುಂಬಾರ,ಫಕ್ರುಸಾಬ್ ನದಾಫ, ಸೋಮನಗೌಡ ಹೊಗರನಾಳ ಸುಕ್ರು ನದಾಫ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.