ನವಲಗುಂದ:
ಅವರು ಬುಧವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಗಂಗಾಮತಸ್ಥ ಹಿತಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಚೌಡಯ್ಯನವರ 906ನೇ ಜಯಂತಿ ಉದ್ದೇಶಿಸಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ನಿಂಗಪ್ಪ ಅಸುಂಡಿ ಮಾತನಾಡಿ, ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯ ಪ್ರಮುಖವಾದವರು. ಅವರ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ. ಪಟ್ಟಣದ ಯಾವುದಾದರೊಂದು ಪ್ರಮುಖ ರಸ್ತೆಯೊಂದಕ್ಕೆ ಅಂಬಿಗರ ಚೌಡಯ್ಯ ಎಂದು ನಾಮಕರಣ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.ತಾಲೂಕು ಗಂಗಾಮತಸ್ಥ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಅರ್ಜುನ ಗುಳೇದ, ಕಿರಣ ಉಳ್ಳಿಗೇರಿ ಮಾತನಾಡಿದರು. ನಂತರ ವಿಶ್ವಗಂಗಾನಗರದಲ್ಲಿರುವ ಗಂಗಾ ಪರಮೇಶ್ವರಿ ಹಾಗೂ ನಿಜಶರಣ ಅಂಬಿಗೇರ ಚೌಡಯ್ಯ ದೇವಸ್ಥಾನದಲ್ಲಿ ಅನ್ನ ಪ್ರಸಾದ ಜರುಗಿತು.
ಮುಖಂಡರಾದ ಸಹದೇವ ಗುಳೇದ, ಸುರೇಶ ಹಿರಗಣ್ಣವರ, ಬಸವರಾಜ ತೊರಗಲ್ಲ, ಮಂಜುನಾಥ ಸುಣಗಾರ, ಧರ್ಮರಾಜ ಗುಳೇದ, ನಿಂಗಪ್ಪ ಬಾರಕೇರ, ಪರಶುರಾಮ ಗುಳೇದ ಶರಣಪ್ಪ ಬನಹಟ್ಟಿ, ಪಾಪು ಅಂಬಿಗೇರ, ಯಲ್ಲಪ್ಪ ಮಸಾಲಜಿ, ಆನಂದ ಮಸಾಲಜಿ, ಶಿವಾನಂದ ಗುಡಿಸಾಗರ ಸೇರಿದಂತೆ ಹಲವರಿದ್ದರು.