ಕನ್ನಡಪ್ರಭ ವಾರ್ತೆ ಹಾಲಿಂಗಪುರತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಪ್ರತಿಯೊಬ್ಬರ ಆರೋಗ್ಯ ಕಾಳಜಿ ಮಾಡುವವರು ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು ಮಾತ್ರ. ಅವರು ನಮ್ಮ ಪರಿವಾರದ ಸದಸ್ಯರಿದ್ದಂತೆ. ಅವರ ಜೊತೆಯಲ್ಲಿ ನಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಪುರಸಭೆಯ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ ಹೇಳಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಾದಿಯಾಗಿ ಪುರಸಭೆಯ ಎಲ್ಲರೂ ಸೇರಿ ರಾಜೇಶ ಭಾವಿಕಟ್ಟಿ ಮತ್ತು ಬಲವಂತಗೌಡ ಪಾಟೀಲಗೆ ಗೌರವ ಸನ್ಮಾನ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಸೇರಿದವರೆಲ್ಲ ಪ್ರಭು ಮಲಾಬಾದಿ ಅವರ ವ್ಯವಸ್ಥೆಯ ಭೋಜನ ಸವಿದು, ಹುಟ್ಟುಹಬ್ಬ ಆಚರಿಸಿಕೊಂಡ ಮಹನೀಯರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಲೆಕ್ಕಪರಿಶೋಧಕ ಕುಲಕರ್ಣಿ ಮತ್ತು ರವಿ ಹಲಸಪ್ಪಗೋಳ ಮಾತನಾಡಿದರು. ಮುಖಂಡರಾದ ಅರ್ಜುನ ದೊಡಮನಿ, ವಿಠಲ ಕುಳಲಿ, ಲಕ್ಷ್ಮಣ ಮಾಂಗ, ಶಂಕರಗೌಡ ಪಾಟೀಲ, ಈಶ್ವರ ಚಮಕೇರಿ, ರಾಮಣ್ಣ ಹಟ್ಟಿ, ಮಹಾಲಿಂಗಪ್ಪ ಮಾಳಿ, ಶಿವು ಕಡಬಲ್ಲವರ, ಪ್ರಭು ಮಲಾಬಾದಿ, ಈರಣ್ಣ ಸೊನ್ನದ, ಶಂಕರ ಸೊನ್ನದ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮತ್ತು ರಾಜು ಹೂಗಾರ, ಎಂ.ಎಸ್. ಮುಗಳಖೋಡ, ಸಿಬ್ಬಂದಿ ಸಿಪಾಯಿ ರಾಮು, ಮಹಾಲಿಂಗ ಮಾಂಗ, ರಂಗಾ ಹಲಸಪ್ಪಗೋಳ, ಲಖನ ದೊಡಮನಿ, ಚಂದ್ರವ್ವ ಮಾವಿನಹಿಂಡಿ, ಯಲ್ಲವ್ವ ಮಾಂಗ ಮುಂತಾದವರಿದ್ದರು.