ಬಾಲ್ಯವಿವಾಹ ತಡೆಗೆ ಬೇಕು ನಾಗರಿಕರ ಬೆಂಬಲ: ವಿನೋದ ಪತ್ತಾರ

KannadaprabhaNewsNetwork |  
Published : Jun 21, 2025, 12:49 AM IST
ತೇರದಾಳದ ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳ ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ತೇರದಾಳ: ಬಾಲ್ಯ ವಿವಾಹ ನಾಗರಿಕ ಪ್ರಪಂಚಕ್ಕೆ ಅಂಟಿದ ಭಯಂಕರ ಪಿಡುಗಾಗಿದ್ದು, ಭಾರತದಲ್ಲಿ ಹೆಚ್ಚು ಆಚರಣೆಯಲ್ಲಿದೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳಾಗುತ್ತಿದ್ದು, ದೈಹಿಕ ಸಕ್ಷಮತೆಯ ಕೊರತೆಯ ಕಾರಣ ಸ್ತ್ರೀ ಮರಣವೂ ಹೆಚ್ಚುತ್ತದೆಂದು ವಕೀಲ ವಿನೋದ ಪತ್ತಾರ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಬಾಲ್ಯ ವಿವಾಹ ನಾಗರಿಕ ಪ್ರಪಂಚಕ್ಕೆ ಅಂಟಿದ ಭಯಂಕರ ಪಿಡುಗಾಗಿದ್ದು, ಭಾರತದಲ್ಲಿ ಹೆಚ್ಚು ಆಚರಣೆಯಲ್ಲಿದೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳಾಗುತ್ತಿದ್ದು, ದೈಹಿಕ ಸಕ್ಷಮತೆಯ ಕೊರತೆಯ ಕಾರಣ ಸ್ತ್ರೀ ಮರಣವೂ ಹೆಚ್ಚುತ್ತದೆಂದು ವಕೀಲ ವಿನೋದ ಪತ್ತಾರ ಹೇಳಿದರು.

ತೇರದಾಳ ಪಟ್ಟಣದಲ್ಲಿ ಪಿಯು ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಹಯೋಗದಲ್ಲಿ ದಾನಿಗೊಂಡ ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಕಾನೂನು ಸುರಕ್ಷತಾ ಕ್ರಮಗಳು, ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ, ಸರ್ಕಾರದ ನೆರವಿನಡಿ ಕಾನೂನು ನೆರವು, ಸಾಥಿ, ಲೋಕ ಅದಾಲತ್ ಸೌಲಭ್ಯಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.

ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಪ್ರಕಾಶ ಮಾಳಿ ಕಾನೂನು ಅರಿವು ಬಗ್ಗೆ ಪ್ರಾಸ್ತಾವಿಕ ಮಾತುಗಳಾಡಿದರು. ಉಪನ್ಯಾಸಕರಾದ ಬಿ.ಎಸ್.ನೇಗಿನಾಳ ಅವರು ಅತಿಥಿ ಪರಿಚಯ ಹಾಗೂ ಸತ್ಕಾರ ಸಮಾರಂಭ ನಡೆಸಿಕೊಟ್ಟರು. ಭರತೇಶ ಘಟನಟ್ಟಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ