ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ಹಳೇನಗರದ ಕನಕ ಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಪೌರ ಕಾರ್ಮಿಕರ ಕುಟುಂಬ ಸದಸ್ಯರು ಸಹ ಉತ್ತಮ ಆರೋಗ್ಯವಂತಾರಾಗಿ ಬಾಳಬೇಕು. ದುಶ್ಚಟಗಳಿಂದ ದೂರವಿದ್ದು ಸದೃಢರಾಗಬೇಕು. ಜೀವನದ ಜಂಜಾಟದಲ್ಲಿ ಕ್ರೀಡೆಗಳು ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಕಾರ್ಮಿಕರಿಗಾಗಿ ಕ್ರೀಡಾಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ಪೌರಾಯುಕ್ತ ಕೆ.ಎನ್ ಹೇಮಂತ್ ಗುಂಡು ಎಸೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ನಗರ ಸುಂದರಗೊಳಿಸುವಲ್ಲಿ ಪೌರ ಕಾರ್ಮಿಕರ ಶ್ರಮ ಅನನ್ಯವಾದದ್ದು. ಸ್ವಚ್ಚತೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಇವರೇ ನಿಜವಾದ ವೈದ್ಯರು. ಇವರನ್ನು ಸಮಾಜದ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗಾಗಿ ಸಾಕಷ್ಟು ಸೌಲತ್ತು ಕೊಡುತ್ತಿದೆ. ಅವನ್ನು ಪ್ರಾಮಾಣಿಕವಾಗಿ ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕೆಂದರು.ನಗರಸಭೆ ಸದಸ್ಯ ಟಿಪ್ಪುಸುಲ್ತಾನ್ರವರ ಅವಳಿ ಮಕ್ಕಳಾದ ರಾಷ್ಟ್ರಮಟ್ಟದ ಕರಾಟೆ ಪಟುಗಳಾದ ಉಮರ್ ಫಾರೂಕ್, ಅಹಮದ್ ಸಿದ್ದಿಕ್ ಹಾಗೂ ನಗರಸಭೆ ಗುಮಾಸ್ತ ಬಸವರಾಜ್ ಬಿ. ನಾಯ್ಕ್ ಅವರ ಪುತ್ರಿ, ಈಜು ಸ್ಪರ್ಧೆಯ ರಾಷ್ಟ್ರಮಟ್ಟದ ಕ್ರೀಡಾಪಟು ಬಿ. ಲತೀಕಾರವರು ಕ್ರೀಡಾ ಜ್ಯೋತಿಯನ್ನು ನಗರಸಭೆ ಅಧ್ಯಕ್ಷರಿಗೆ ಹಸ್ತಾಂತರಿಸಿ ಕ್ರೀಡಾಕೂಟ ಚಾಲನೆಗೆ ಮುನ್ನುಡಿ ಬರೆದರು.
ಕ್ರೀಡಾಕೂಟದಲ್ಲಿ ಗುಂಡು ಎಸೆತ, ಕ್ರಿಕೆಟ್, ಲೆಮನ್ ಇನ್ ದ ಸ್ಪೂನ್, ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್, ಬಾಂಬ್ ಇನ್ ದ ಸಿಟಿ, ಷಟಲ್ ಬ್ಯಾಡ್ಮಿಂಟನ್ ಸೇರಿದಂತೆ ಇನ್ನಿತರ ಸ್ಪರ್ಧೆಗಳು ಜರುಗಿದವು.