ಹಿರೇಕೆರೂರು: ಸ್ವಚ್ಛತೆ ಮತ್ತು ಶಿಕ್ಷಣ ಎರಡೂ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಸಮಾಜ ಸೇವಕ ಜಿ.ಪಿ. ಪ್ರಕಾಶ ಗೌಡರ ಮಾತನಾಡಿ, ಶಿಕ್ಷಣದಿಂದ ಬದುಕು ಬದಲಾಗಬೇಕು. ನೀವು ಪಡೆಯುವ ಶಿಕ್ಷಣ ಮುಂದಿನ ಬದುಕಿನ ದಾರಿದೀಪವಾಗಬೇಕು ಎಂದರು. ಹಳ್ಳಿಗಳಲ್ಲಿ ಇಂಥ ಶಿಬಿರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಉತ್ತಮ ಶಿಕ್ಷಣ ಪಡೆದುಕೊಂಡಿದ್ದೇ ಆದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮತ್ತು ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದು ಹೇಳಿದರು.ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯೆ ಆಶಾ ತಳವಾರ, ಪುಷ್ಪಾ ಕೆಳಗಿನಮನಿ, ಜಯಕುಮಾರ್ ಹುಲ್ಲಿನಕೊಪ್ಪ, ಕಾರ್ಯಕ್ರಾಧಿಕಾರಿಗಳಾದ ಪ್ರೊ. ಹರೀಶ್ ಡಿ., ಪ್ರೊ. ಗೀತಾ ಎಂ., ಪ್ರಾಧ್ಯಾಪಕ ನವೀನ ಎಂ., ಪ್ರಸನ್ನಕುಮಾರ ಜೆ., ಶಿವಾನಂದ ಸಂಗಾಪುರ, ಸಹ ಶಿಬಿರಾಧಿಕಾರಿ ಡಾ. ಕಾಂತೇಶ ರೆಡ್ಡಿ ಗೋಡಿಹಾಳ, ಬಸವರಾಜ ಮಾಗಳದ ಹಿರೇಕೆರೂರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಂಜೀವ ಭಜಂತ್ರಿ, ಕಿರಣಕುಮಾರ ಮೊದಲಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಗ್ನಿ ಅವಘಡಗಳು ಮತ್ತು ಅವುಗಳನ್ನು ನಿವಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.