ಗ್ರಾಮೀಣ ಸೊಗಡಿನ ಕಾದಂಬರಿಗಳು ಹೆಚ್ಚು ಹೆಚ್ಚು ಬರಲಿ: ಅನಂತಶಯನ

KannadaprabhaNewsNetwork |  
Published : Jun 03, 2026, 02:30 AM IST
ಚಿತರ್ರ :  2ಎಂಡಿಕೆ4 : ‘ಶಕುನದ ಹಕ್ಕಿ’ ಕಾದಂಬರಿ ಬಿಡುಗಡೆ | Kannada Prabha

ಸಾರಾಂಶ

ಲೇಖಕ ಹೇಮಂತ್ ಪಾರೇರ ರಚಿಸಿರುವ ‘ಶಕುನದ ಹಕ್ಕಿ’ ಕಾದಂಬರಿ ನಗರದಲ್ಲಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಾದಂಬರಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಲೇಖಕ ಹೇಮಂತ್ ಪಾರೇರ ರಚಿಸಿರುವ ‘ಶಕುನದ ಹಕ್ಕಿ’ ಕಾದಂಬರಿ ನಗರದಲ್ಲಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಾದಂಬರಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಸೊಗಡನ್ನು ಪ್ರೀತಿಸುವ ಕಾದಂಬರಿಗಳು ಹೆಚ್ಚು ಹೆಚ್ಚು ಬರಬೇಕು ಎಂದರು.

ಹಿರಿಯ ಸಾಹಿತಿ ಭಾರದ್ವಾಜ ಕೆ. ಆನಂದ ತೀರ್ಥ ಅವರು ಮಾತನಾಡಿ, ಕಾದಂಬರಿಯನ್ನು ಓದುಗರ ವಿಮರ್ಶೆಗೆ ಬಿಡಬೇಕು. ಓದುಗರು ಅದನ್ನು ಯಾವ ಕೋನದಿಂದ ನೋಡುತ್ತಾರೆ ಎಂಬುವುದು ಮುಖ್ಯ ಎಂದರು.

ಜಾನಪದ ಪರಿಷತ್ ನ ಮಡಿಕೇರಿ ತಾಲೂಕು ಅಧ್ಯಕ್ಷ ಹಾಗೂ ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತಿಗಳ ಹಾಗೂ ಬರಹಗಾರರ ಕೊರತೆ ಇದೆ ಎಂಬ ಆರೋಪಗಳಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯಾಸಕ್ತರ ಹಾಗೂ ಬರಹಗಾರರ ಸಂಖ್ಯೆ ಹೆಚ್ಚಾಗಿದೆ ಎಂದರು.

ಸಾಹಿತಿ ಸಂಗೀತ ರವಿರಾಜ್ ಮಾತನಾಡಿ, ಕಾದಂಬರಿ ಓದುಗರನ್ನು ಕೊನೆಯವರೆಗೂ ಸೆಳೆಯುತ್ತದೆ ಎಂದರು.

‘ಶಕುನದ ಹಕ್ಕಿ’ ರಚನೆಕಾರ ಹೇಮಂತ್ ಪಾರೇರ ಅವರು ಮಾತನಾಡಿ, ತಮ್ಮ ಕಣ್ಣ ಮುಂದೆಯೇ ಗ್ರಾಮೀಣ ಭಾಗದಲ್ಲಿ ನಡೆದ ಜೂಜಾಟದ ನೈಜ ಘಟನೆಯನ್ನು ವಸ್ತು ವಿಷಯನ್ನಾಗಿಸಿಕೊಂಡು ಈ ಕಾದಂಬರಿ ರಚನೆಯಾಗಿದೆ ಎಂದು ವಿವರಿಸಿದರು.

ಈ ಕಾದಂಬರಿಯನ್ನು ತಮ್ಮ ಸಾಹಿತ್ಯ ಗುರುಗಳಾದ ಬಿ.ಜಿ. ಅನಂತಶಯನ ಹಾಗೂ ಭಾರದ್ವಾಜ ಕೆ. ಆನಂದ ತೀರ್ಥ ಕಣಿವೆ ಅವರಿಗೆ ಅರ್ಪಿಸುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಷ್ಠೆ ಇದ್ದರೆ ಯಶಸ್ವಿ ಉದ್ಯಮ ಸಾಧ್ಯ: ಅಬೀದ್ ಗದ್ಯಾಳ
ಆನಂದಶರದಿ ಪಾರಮಾರ್ಥಿಕ ಸಾಧನೆಗೆ ಪ್ರೇರಣೆಯಾಗಲಿ: ಕೃಷ್ಣಾಪುರ ಶ್ರೀ