ಸಹಬಾಳ್ವೆ, ಸಹೋದರತೆ ಹಿಂದೂ ಧರ್ಮದ ತಳಹದಿಗಳು: ಆರ್‌ಎಸ್‌ಎಸ್ ಜ್ಯೇಷ್ಠ ಪ್ರಚಾರಕ ದಾ.ಮಾ. ರವೀಂದ್ರ

KannadaprabhaNewsNetwork |  
Published : Feb 06, 2026, 01:30 AM IST
ಫೋಟೋ: 5 ಹೆಚ್‌ಎಸ್‌ಕೆ 3 ಮತ್ತು 43: ಹೊಸಕೋಟೆಯಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿರಾಠ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಶ್ರೀ ಪ್ರಣವಾನಂದಪುರು ಮಹಾಸ್ವಾಮಿಗಳು ಹಾಗೂ ಆರ್‌ಎಸ್‌ಎಸ್‌ನ ಜೇಷ್ಠ ಪ್ರಚಾರಕ್ ದಾ ಮಾ ರವೀಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ಭರತ ಭೂಮಿಯ ಫಲವತ್ತತೆ, ಸಾವಿರಾರು ನದಿಗಳು, ಪ್ರಕೃತಿಯ ಸೊಬಗು ಬೇರಾವ ದೇಶದಲ್ಲೂ ಕಾಣಲು ಸಿಗದು, ನಮ್ಮ ಭೂಮಿಯಲ್ಲಿ ಶ್ರೀ ಕೃಷ್ಣ ಭೋದಿಸಿದ ಭಗವದ್ಗೀತೆ ಇಂದು ಪ್ರಪಂಚದ ನೂರಾರು ದೇಶಗಳಲ್ಲಿ ಕಲಿಕಾ ವಸ್ತುವಾಗಿದೆ, ಅದರಲ್ಲಿನ ಸಾರ, ಸತ್ವವನ್ನು ಅಳವಡಿಸಿಕೊಂಡು ಪಠಣ ಮಾಡುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಹೊಸಕೋಟೆ

ಭೂಮಂಡಲದಲ್ಲಿ ಹಿಂದೂ ಧರ್ಮವನ್ನು ೪ ಸಾವಿರ ವರ್ಷಗಳ ಹಿಂದಿನಿಂದಲೂ ಪಾಲಿಸುತ್ತಾ ಬಂದಿದ್ದು, ಅದಕ್ಕೆ ಸೂಕ್ತ ಪುರಾವೆಗಳೂ ಇವೆ, ಈ ಪ್ರಕೃತಿಯನ್ನು ದೈವ ನಿರ್ಮಿಸಿದರೆ ಸಂಸ್ಕ್ರತಿಗಳನ್ನು ಮಾನವ ನಿರ್ಮಾಣ ಮಾಡಿಕೊಂಡಿದ್ದು ಹಿಂದೂ ಧರ್ಮದಲ್ಲಿ ಸಹಬಾಳ್ವೆ, ಸಹೋದರತ್ವ ಭಾವನೆಗಳು ತಳಹದಿಯಾಗಿದೆ ಎಂದು ಆರ್‌ಎಸ್‌ಎಸ್ ನ ಜ್ಯೇಷ್ಠ ಪ್ರಚಾರಕ ದಾ.ಮಾ.ರವೀಂದ್ರ ತಿಳಿಸಿದರು.

ನಗರದ ಬಿಎಂಆರ್‌ಡಿ ಬಡಾವಣೆಯಲ್ಲಿ ತಾಲೂಕು ಹಿಂದೂ ಪರ ಸಂಘಟನೆಗಳ ವತಿಯಿಂದ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭರತ ಭೂಮಿಯ ಫಲವತ್ತತೆ, ಸಾವಿರಾರು ನದಿಗಳು, ಪ್ರಕೃತಿಯ ಸೊಬಗು ಬೇರಾವ ದೇಶದಲ್ಲೂ ಕಾಣಲು ಸಿಗದು, ನಮ್ಮ ಭೂಮಿಯಲ್ಲಿ ಶ್ರೀ ಕೃಷ್ಣ ಭೋದಿಸಿದ ಭಗವದ್ಗೀತೆ ಇಂದು ಪ್ರಪಂಚದ ನೂರಾರು ದೇಶಗಳಲ್ಲಿ ಕಲಿಕಾ ವಸ್ತುವಾಗಿದೆ, ಅದರಲ್ಲಿನ ಸಾರ, ಸತ್ವವನ್ನು ಅಳವಡಿಸಿಕೊಂಡು ಪಠಣ ಮಾಡುತ್ತಿದ್ದಾರೆ, ಸಂಪೂರ್ಣ ಮುಸ್ಲಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲಿ ಹಿಂದೂ ಆಚರಣೆಗಳು ಮುಂದುವರಿದಿವೆ, ಇತಿಹಾಸದಲ್ಲಿ ನಮ್ಮ ಭಾರತ ಎಂದಿಗೂ ಯಾರೊಂದಿಗೂ ಯುದ್ಧಕ್ಕೆ ಮುಂದಾಗಿಲ್ಲ, ಬದಲಾಗಿ ಪಾರ್ಸಿಗಳಿಗೆ ಹಾಗೂ ಯಹೂದಿಗಳಿಗೆ ಆಶ್ರಯ ನೀಡಿದೆ, ಆದರೆ ಪಾರ್ಸಿಗಳು ಆಶ್ರಯ ಪಡೆದು ಆಕ್ರಮಣ ಮಾಡಿದರು, ಯಹೂದಿಗಳು ಆಶ್ರಯ ಪಡೆದು ಉತ್ತಮ ಭಾಂದವ್ಯ ಹೊಂದಿದರು ಎಂದು ತಿಳಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶಿವನಾಪುರ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀ ಪ್ರಣಾವನಂದಪುರಿ ಮಹಾ ಸ್ವಾಮೀಜಿ ಮಾತನಾಡಿ, ಋಷಿ ಮುನಿಗಳ ಕಾಲದಿಂದಲೂ ನಮಗೆ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಲಾಗಿದೆ, ನಮ್ಮಲ್ಲಿ ವಿಗ್ರಹಾರಾಧನೆ, ಭಾವಚಿತ್ರ ಆರಾಧನೆ ಮಾಡಲಾಗುತ್ತದೆ. ವಿಗ್ರಹ ಅಥವಾ ಭಾವಚಿತ್ರ ಮುಕ್ಕಾದಲ್ಲಿ ಅವುಗಳನ್ನು ನೀರಿನಲ್ಲಿ ಬಿಡುತ್ತೇವೆ, ಪಂಚಭೂತಗಳೇ ನಮ್ಮ ದೈವಗಳಾಗಿದ್ದು ಅವುಗಳ ಆರಾಧನೆ, ಪೂಜೆ ಮಾಡಿ ದೈವಗಳನ್ನು ಕಾಣುತ್ತಿದ್ದೇವೆ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಮಾತು ಸತ್ಯ, ಒಗ್ಗಟ್ಟಾಗಿ ಬಾಳಿ ಬದುಕೋಣ ಎಂದು ಕರೆ ನೀಡಿದರು.

ಹಿಂದೂ ನಾಯಕಿ ಡಾ.ಸುಮಾ ಮಾತನಾಡಿ, ಸನಾತನ ಧರ್ಮವು ಅನಾದಿಕಾಲದಿಂದಲೂ ಬಂದಿರುವ ಶಾಶ್ವತ ಆಚರಣೆ, ಕರ್ಮ, ಜ್ಞಾನ, ಆತ್ಮ ಹಾಗೂ ಮೋಕ್ಷಗಳು ಇದರಲ್ಲಿ ದೊರೆಯುತ್ತವೆ, ಮಹಿಳೆಯರು ಹೆಚ್ಚಾಗಿ ನಮ್ಮ ಹಿಂದೂ ಸಂಪ್ರದಾಯವನ್ನು ಮನೆಯಲ್ಲಿ ಪಾಲಿಸಲು ಪ್ರೇರಣೆಯಾಗಬೇಕು, ಮಕ್ಕಳಲ್ಲಿ ನಮ್ಮ ಹಿಂದುತ್ವ ಹಾಗೂ ಸನಾತನತೆಯನ್ನು ಮೈಗೂಡಿಸಬೇಕು, ಭಗವದ್ಗೀತೆಯ ಪಠಣ ಹಾಗೂ ಅದರ ಅರ್ಥ ಭೋದಿಸಬೇಕು ಎಂದ ಅವರು, ನಮ್ಮ ಹಿಂದೂ ಸಂಸ್ಕ್ರತಿಯಲ್ಲಿ ಮಾತ್ರ ವಸುದೈವ ಕುಟುಂಬಕಂ ಹಾಗೂ ಅತಿಥಿ ದೇವೋಭವ ಎಂದು ಪಾಲಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ೧೮೦ ಪೌರ ಕಾರ್ಮಿಕರಿಗೆ, ವಾಟರ್ ಮ್ಯಾನ್ಗಳಿಗೆ, ಸ್ಮಶಾನದಲ್ಲಿ ಗುಂಡಿ ತೋಡುವವರಿಗೆ ಕಂಬಳಿ, ಜರ್ಕೀನ್ ಹಾಗೂ ಸೀರೆಯನ್ನು ವಿತರಿಸಿ ಗೌರವ ಸಮರ್ಪಣೆ ಮಾಡಲಾಯಿತು.

ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ಹಿಂದೂ ಸಂಪ್ರದಾಯ, ಒಳ್ಳೆಯ ಚಿಂತನೆ, ರಾಷ್ಟ್ರೀಯತೆ ಅಳವಡಿಕೊಂಡು ನಮ್ಮ ಯುವಜನತೆ ದೇಶವನ್ನು ಬಲಪಡಿಸಲು ಬಯಸಿದ್ದಾರೆ, ಹಿಂದೂ ಜನಾಂಗ ಒಂದಾಗುವ ಮೂಲಕ ನೂತನ ಭಾರತ, ಅಭಿವೃದ್ಧಿ ಹೊಂದಿದ ಭಾರತವನ್ನಾಗಿಸುವ ಗುರಿ ಹೊಂದಬೇಕು.

ಸತೀಶ್ , ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷತ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಕಾಂಗ್ರೆಸ್‌ ಶಾಸಕರಿಂದ ಒತ್ತಡ
ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ