ಸರಳ ಪ್ರಮಾಣಿತ ಸಂಸ್ಕೃತ ಕಾರ್ಯಾಗಾರ

KannadaprabhaNewsNetwork |  
Published : Jan 18, 2024, 02:04 AM IST
42 | Kannada Prabha

ಸಾರಾಂಶ

ಜನರು ಸಂಸ್ಕೃತವನ್ನು ಸರಳ ರೀತಿಯಲ್ಲಿ ಕಲಿಯುವಂತೆ ಮಾಡುವುದು. ಇದು ದೈನಂದಿನ ಸಂವಹನ ಮತ್ತು ಶೈಕ್ಷಣಿಕ ಸಂದರ್ಭಗಳಲ್ಲಿ ಸರಳೀಕೃತ ಸಂಸ್ಕೃತವನ್ನು ಅನ್ವಯಿಸುವ ಮಾರ್ಗಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯ ಭಾಷಾ ಸಮಿತಿಯು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಮಹಾರಾಜರ ಸಂಸ್ಕೃತ ಕಾಲೇಜಿನ ಸಹಯೋಗದಲ್ಲಿ ಮಹಾರಾಜರ ಸಂಸ್ಕೃತ ಕಾಲೇಜು ಆವರಣದಲ್ಲಿ ಸರಳ ಮನಕ ಸಂಸ್ಕೃತ (ಸರಳ ಪ್ರಮಾಣಿತ ಸಂಸ್ಕೃತ) ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಿತ್ತು.

ಕಾರ್ಯಾಗಾರವು ನಾಲ್ಕು ಗೋಷ್ಠಿಗಳನ್ನು ಒಳಗೊಂಡಿತ್ತು. ಆಧುನಿಕ ಸಂದರ್ಭಗಳಲ್ಲಿ ಸರಳೀಕೃತ ಸಂಸ್ಕೃತದ ಮಹತ್ವವನ್ನು ಕಲಿಸುವ ಉದ್ದೇಶದಿಂದ ಖ್ಯಾತ ವಿದ್ವಾಂಸರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿತ್ತು.

ಜನರು ಸಂಸ್ಕೃತವನ್ನು ಸರಳ ರೀತಿಯಲ್ಲಿ ಕಲಿಯುವಂತೆ ಮಾಡುವುದು. ಇದು ದೈನಂದಿನ ಸಂವಹನ ಮತ್ತು ಶೈಕ್ಷಣಿಕ ಸಂದರ್ಭಗಳಲ್ಲಿ ಸರಳೀಕೃತ ಸಂಸ್ಕೃತವನ್ನು ಅನ್ವಯಿಸುವ ಮಾರ್ಗಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಚಾಮರಾಜನಗರ, ಹಾಸನ, ಮಂಡ್ಯ ಸೇರಿದಂತೆ ನೆರೆಯ ಜಿಲ್ಲೆಗಳ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರು, ಪಾಠಶಾಲಾ ಶಿಕ್ಷಕರು, ಪದವಿ ಕಾಲೇಜು ಸಂಸ್ಕೃತ ಉಪನ್ಯಾಸಕರು, ಲೇಖಕರು, ಸಂಸ್ಕೃತ ಭಾಷಾ ಪತ್ರಿಕೆ ಸಂಪಾದಕರು, ಭಾಷಾ ಶಾಸ್ತ್ರದ ವಿದ್ವಾಂಸರು, ಸಂಶೋಧಕರು ಹಾಗೂ ಸಂಸ್ಕೃತ ಭಾಷಾ ಅಭಿಜ್ಞರು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ವಿದ್ವಾನ್ ಎಚ್.ವಿ. ನಾಗರಾಜ ರಾವ್ ಕಾರ್ಯಾಗಾರ ಉದ್ಘಾಟಿಸಿದರು. ದಿನವಿಡೀ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಸರಳ ಸ್ವರೂಪದಲ್ಲಿ ಸಂಸ್ಕೃತ ಕಲಿಸುವುದು ಹೇಗೆ, ಬೋಧನಾ ತಂತ್ರಗಳು, ಆನ್ಲೈನ್ನಲ್ಲಿ ಕಲಿಸುವುದು ಹೇಗೆ ಮತ್ತು ಬೋಧನಾ ತಂತ್ರಜ್ಞಾನದ ಬಗ್ಗೆ ಶಿಕ್ಷಕರಿಗೆ ಕಲಿಸಲಾಯಿತು. ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ

ಪಿ. ಸತ್ಯನಾರಾಯಣ ಹಾಗೂ ಮಂಜುನಾಥ್ ಭಟ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!