ಶಿಗ್ಗಾಂವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಸಹಕಾರಿಯಾಗಿದ್ದು, ಗ್ರಾಮೀಣ ಪ್ರದೇಶ ಹಾಗೂ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬಳಿಕ ಮಾತನಾಡಿದ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ಹಲವು ಯೋಜನೆ ಜಾರಿ ಮಾಡಿದೆ. ಇಂದಿರಾ ಗಾಂಧಿ ಅವರ ಉಳುವವನೇ ಭೂಮಿಯ ಒಡೆಯ ಸೇರಿ ಹಲವು ಯೋಜನೆಗಳು ಬಡ ಕುಟುಂಬಗಳಿಗೆ ಆಧಾರಸ್ತಂಭವಾಗಿದ್ದು, ಬಡವರ ಪರ ಕಾಂಗ್ರೆಸ್ ಸರ್ಕಾರದ ನಿಲುವುಗಳಿವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್, ಅಲ್ತಾಫ್ ಹಳ್ಳೂರ್, ಕಿರಣ್ ಪಾಟೀಲ್, ಬಾಬರ್ ಬವಾಜಿ, ಎಸ್.ಎಫ್. ಮನಕಟ್ಟಿ, ಶಿವಾನಂದ ರಾಮಗಿರಿ, ಪರಶುರಾಮ ಕಾಳಿ, ಕಲ್ಲಪ್ಪ ಬಿರೊಳ್ಳಿ, ಯಲ್ಲಪ್ಪ ನವಲೂರ್, ಆನಂದ ಲಮಾಣಿ, ಈರಪ್ಪ ಪೂಜಾರ್, ನಾಗರಾಜ್ ಗೌರಿ, ಶಾಹಜಮಾನ್ ಮುಜಾಹಿದ್, ಮೆಹಬೂಬ್ ರಾಮದುರ್ಗ, ಸಂತೋಷ ಚಾಕಲಬ್ಬಿ ಇದ್ದರು.