)
ಗಿರೀಶ್ ಮಾದೇನಹಳ್ಳಿ
ಮುಂಬಡ್ತಿ ವಿಚಾರವಾಗಿ ಪೂರ್ವ ವಲಯ ಐಜಿಪಿ ಡಾ। ಬಿ.ಆರ್.ರವಿಕಾಂತೇಗೌಡ ಸೇರಿ 318 ಅಧಿಕಾರಿಗಳಿಗೆ ಸಂಬಂಧಿಸಿದ ನಾಪತ್ತೆಯಾಗಿವೆ ಎನ್ನಲಾದ ದಾಖಲೆಗಳ ಶೋಧನೆಗೆ ಸಮಿತಿಯೊಂದನ್ನು ರಾಜ್ಯ ಗೃಹ ಇಲಾಖೆ ರಚಿಸಿದೆ.
ಸೇವಾ ಹಿರಿತನ ಆಧಾರದ ಮೇರೆಗೆ ಉಪಾಧೀಕ್ಷರ ಹುದ್ದೆಯಿಂದ ಹೆಚ್ಚುವರಿ ಅಧೀಕ್ಷರ (ನಾನ್ ಐಪಿಎಸ್-ಎಎಸ್ಪಿ) ಹುದ್ದೆ ಪದನ್ನೋತಿಗೆ ಸಂಬಂಧಿಸಿದ ದಾಖಲೆಗಳು ‘ಕಣ್ಮರೆ’ಯಾಗಿವೆ ಎಂದು ಸರ್ಕಾರ ಹೇಳಿದೆ. ಈಗ ಉಪಾಧೀಕ್ಷರ (ಸಿವಿಎಲ್) ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದ ಬೆನ್ನಲ್ಲೇ ಕಡತಗಳು ನಾಪತ್ತೆ ಸಂಗತಿ ಚರ್ಚೆಗೆ ಬಂದಿದೆ.ಅಲ್ಲದೆ ಮುಂಬಡ್ತಿ ವಿಷಯವಾಗಿ ನೇರ ನೇಮಕಾತಿ ಡಿವೈಎಸ್ಪಿ (ಡಿಆರ್) ಹಾಗೂ ಮುಂಬಡ್ತಿ ಡಿವೈಎಸ್ಪಿ (ಪಿಆರ್)ಗಳ ಮಧ್ಯೆ ಜಟಾಪಟಿ ನಡೆದಿದೆ. ಹಳೇ ದಾಖಲೆಗಳಿಲ್ಲದೆ ಜ್ಯೇಷ್ಠತಾ ಪಟ್ಟಿ ಪ್ರಕಟಣೆಗೆ ಪಿಆರ್ ಡಿವೈಎಸ್ಪಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಪಿಆರ್ ಡಿವೈಎಸ್ಪಿಗಳು ಸಹ ಹಳೇ ತಪ್ಪುಗಳನ್ನು ಸರ್ಕಾರ ಸರಿಪಡಿಸಿದೆ ಎಂದು ವಾದಿಸಿದ್ದಾರೆ.
ಐಪಿಎಸ್ ದಾಖಲೆ ನಾಪತ್ತೆ ಹೇಗೆ?:
ಯಾರ್ಯಾರು ಸಮಿತಿಯಲ್ಲಿ?
---
ನಾಪತ್ತೆ ದಾಖಲೆಗಳ ಪತ್ತೆಗೆ ಗೃಹ ಇಲಾಖೆ ಸಮಿತಿ ಕಾರ್ಯಾಚರಣೆಗಿಳಿದೆ. ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿ ಕೆಲ ಸರ್ಕಾರದ ಆದೇಶಗಳು ಲಭ್ಯವಾಗಿರುವುವೆಂದು ತಿಳಿಸಲಾಗಿದೆ. ಈ ಮಾಹಿತಿ ಹಾಗೂ ದಾಖಲೆಗಳನ್ನು ಸರ್ಕಾರದ ಹಂತದ ಮಹಾಲೇಖಪಾಲರ ಕಚೇರಿ ಹಾಗೂ ಡಿಜಿ-ಐಜಿಪಿ ಕಚೇರಿಯಲ್ಲಿ ಶೋಧಿಸುವಂತೆ ಸಮಿತಿಗೆ ಸರ್ಕಾರ ಸೂಚಿಸಿದೆ. ಈ ಹಿನ್ನಲೆಯಲ್ಲಿ ಮಹಾಲೇಖಪಾಲರ ಕಚೇರಿಗೆ ಸಮಿತಿ ಪತ್ರ ಬರೆದು ಮಾಹಿತಿ ಕೋರಿದೆ ಎಂದು ತಿಳಿದು ಬಂದಿದೆ.
ಒಬ್ಬರ ಹೆಸರಿನಲ್ಲಿ
ಹಲವು ವರ್ಷಗಳಿಂದ ಡಿಆರ್ ಡಿವೈಎಸ್ಪಿಗಳಿಗೆ ಮುಂಬಡ್ತಿ ತಪ್ಪಿಸಲು ಕೆಲವರು ಭಾನಗಡಿ ಮಾಡಿದ್ದಾರೆ. ಇದರಿಂದ ಒಬ್ಬರ ಹೆಸರಿನಲ್ಲಿ ನಾಲ್ಕೈದು ಹುದ್ದೆಗಳು ಸೃಜನೆಯಾಗಿದ್ದವು. ಆ ಹುದ್ದೆಗಳ ದಾಖಲೆಗಳು ನಾಪತ್ತೆಯಾಗಿವೆ ಎಂದು ಡಿಆರ್ ಡಿವೈಎಸ್ಪಿಗಳು ಆರೋಪಿಸಿದ್ದಾರೆ.
ನಿವೃತ್ತ ವೇತನ ಸೌಲಭ್ಯ ಹೇಗೆ?:ಕಡತಗಳು ನಾಪತ್ತೆಯಾಗಿದ್ದರೆ ಅಧಿಕಾರಿಗಳಿಗೆ ನಿವೃತ್ತ ಸೌಲಭ್ಯ ಹೇಗೆ ಸಿಗುತ್ತದೆ. ಕೆಲವರು ಗೊಂದಲ ಸೃಷ್ಟಿಸುವ ಸಲುವಾಗಿ ಏಕಸದಸ್ಯ ಸಮಿತಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮೂರು ದಶಕಗಳು ಸೇವೆ ಸಲ್ಲಿಸಿದವರ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು ನಾಪತ್ತೆಯಾಗಲು ಸಾಧ್ಯವೇ? ಎಜೆ ಕಚೇರಿ, ಎಚ್ಆರ್ಎಂಎಸ್ ಅಥವಾ ಡಿಜಿ-ಐಜಿಪಿ ಕಚೇರಿಯಲ್ಲಿ ಶೋಧಿಸಿದರೆ ಕಡತಗಳು ಸಿಗುತ್ತವೆ ಎಂದು ಪಿಆರ್ ಡಿವೈಎಸ್ಪಿಗಳು ಆಗ್ರಹಿಸಿದ್ದಾರೆ.