ಮಧುಗಿರಿ: ಪಟ್ಟಣದ ರಾಘವೇಂದ್ರ ಬಡಾವಣೆಯ ಶ್ರೀಶೃಂಗೇರಿ ಶಂಕರ ಮಠದ ಆವರಣದಲ್ಲಿ ಶ್ರೀಶಂಕರ ಸೇವಾ ಸಮಿತಿಯಿಂದ ನಿರ್ಮಾಣವಾಗಿರುವ ನೂತನ ಶ್ರೀ ಶಂಕರ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಅ.18 ರಂದು ಶುಕ್ರವಾರ ನಡೆಯಲಿದೆ ಎಂದು ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್ ತಿಳಿಸಿದರು.
ಸಮುದಾಯ ಭವನ ಉದ್ಘಾಟನೆ ನಂತರ ಧೂಳಿ ಪಾದಪೂಜೆ, ಅನುಗ್ರಹ ಭಾಷಣ ರಾತ್ರಿ 8.30ಕ್ಕೆ ಶ್ರೀಶಾರದಾ ಚಂದ್ರಮೌಳೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮವಿರುತ್ತದೆ. ನಂತರ ಭಕ್ತಾಧಿಗಳಿಗೆ ಫಲಮಂತ್ರಾಕ್ಷತೆ ಪ್ರಸಾದ ವಿನಿಯೋಗವಿರುತ್ತದೆ. ಜಗದ್ಗುರುಗಳಿಗೆ ಕಾಣಿಕೆ ಸಮರ್ಪಣೆ ,ಭಿಕ್ಷೆ ವಂದನಾದಿ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಎಸ್.ವಿ.ಸೂರ್ಯನಾರಾಯಣ್ರಾವ್, ಖಜಾಂಚಿ ಆಡಿಟರ್ ಲಕ್ಷ್ಮೀಪ್ರಸಾದ್, ನಿರ್ದೇಶಕರುಗಳಾದ ಕೆ.ನಾರಾಯಣ್,ಬಡಕನಹಳ್ಳಿ ರಾಘವೇಂದ್ರ, ಎಂ.ಎಸ್.ಸಂತೋಷ್, ಶ್ರೀನಿವಾಸಶಾಸ್ತ್ರಿ, ಜಿ.ಎನ್.ರಾಘವೇಂದ್ರ,ವಿ.ಭೀಮೇಶ್,ಎಂ.ಎಸ್.ಬದ್ರಿನಾಥ್,ಕೆ.ಎಸ್.ರಾಮಚಂದ್ರರಾವ್,ಬಾಲಕೃಷ್ಣ,ವಿನಯ್ ಶರ್ಮ,ಅಶ್ವತ್ಥ್ ಶರ್ಮ,ಎಂ.ಎನ್.ನಾಗಭೂಷಣ್ ಹಾಗೂ ಅರ್ಚಕ ಶ್ರೀನಿವಾಸ್ ಇದ್ದರು.