ಸೆ.21 ರಿಂದ ವಿಜಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಆರಂಭ: ಕೆ.ವಿ.ಬಸವರಾಜು

KannadaprabhaNewsNetwork |  
Published : Sep 17, 2026, 01:45 AM IST
16ಕೆಎಂಎನ್ ಡಿ22 | Kannada Prabha

ಸಾರಾಂಶ

ಈಗ ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ವಿಶೇಷ ಕೋಚಿಂಗ್ ತರಗತಿ ಆರಂಭಿಸಲಾಗಿದೆ. ಮುಂದಿನ ಅ.2 ಮತ್ತು 4 ರಂದು ಗ್ರಾಮ ಆಡಳಿತ ಅಧಿಕಾರಿಗಳ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಂಸ್ಥೆಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮೀಣ ವಿದ್ಯಾರ್ಥಿಗಳು ಮುಂಬರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಟ್ಟಣದ ವಿಜಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಆರಂಭಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಕೆ.ವಿ.ಬಸವರಾಜು ತಿಳಿಸಿದರು.

ಪಟ್ಟಣದ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯಾಗಿದೆ. ಆರಂಭದಿಂದಲೂ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದರು.

ಈಗ ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ವಿಶೇಷ ಕೋಚಿಂಗ್ ತರಗತಿ ಆರಂಭಿಸಲಾಗಿದೆ. ಮುಂದಿನ ಅ.2 ಮತ್ತು 4 ರಂದು ಗ್ರಾಮ ಆಡಳಿತ ಅಧಿಕಾರಿಗಳ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಂಸ್ಥೆಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ ಎಂದರು.

ಸೆ.21ರಂದ ತರಗತಿ ಆರಂಭಗೊಳ್ಳುತ್ತಿದೆ. ಇದಕ್ಕೆ ದಾಖಲಾತಿ ಶುಲ್ಕವಾಗಿ ವಿದ್ಯಾರ್ಥಿಗಳಿಂದ ಕೇವಲ 500 ರು. ಪಡೆದುಕೊಳ್ಳಲಾಗಿದೆ. 6 ದಿನಗಳ ಕಾಲ ಕೋಚಿಂಗ್ ನೀಡಲಾವುವುದು. ಪ್ರತಿ ನಿತ್ಯ ಕನಿಷ್ಠ 5 ಗಂಟೆಗಳು ಕಾಲ ತರಗತಿಗಳು ನಡೆಯಲಿವೆ ಎಂದರು.

ಒಂದು ತರಗತಿಗೆ ಕನಿಷ್ಠ 60 ಮಂದಿ ವಿದ್ಯಾರ್ಥಿಗಳು ಅವಶ್ಯಕತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿ ಕೋಚಿಂಗ್ ಪಡೆದುಕೊಳ್ಳಬೇಕು, ನಮ್ಮ ಶಾಲೆ ಒಳಗೊಂಡಂತೆ ಹೊರಗಡೆ ಶಾಲೆಗಳ ಮಕ್ಕಳು ಸಹ ಕೋಚಿಂಗ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ಲೋಬಲ್ ಅಕಾಡೆಮಿ ಸಂಸ್ಥಾಪಕ ರಾಜೇಶ್ ಮಾತನಾಡಿ, ರಾಜ್ಯ ಸರ್ಕಾರ ಹಲವು ಇಲಾಖೆಗಳಲ್ಲಿ ಸುಮಾರು 2062 ಹುದ್ದೆಗಳನ್ನು ಆಹ್ವಾನಿಸುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ಪರೀಕ್ಷೆ ನಡೆಯುಲಿ, ಅದಕ್ಕೆ ಅನುಕೂಲವಾಗಲು, ಮುಂದೆ ಪೊಲೀಸ್, ಅರಣ್ಯ ಇಲಾಖೆ,ವಾರ್ಡ್ ನ್, ಸಾರಿಗೆ, ಪಿಡಿಒ, ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಲಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಸಿದ್ದಗೊಳ್ಳಬೇಕು, ಅದಕ್ಕಾಗಿ ಆರಂಭಿಸಿರುವ ಕೋಚಿಂಗ್ ಸೆಂಟರ್ ಗಳನ್ನು ಆರಂಭಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಖಜಾಂಚಿ ರಾಮೇಗೌಡ, ನಿರ್ದೇಶಕ ಸೋಮೇಗೌಡ, ಆಡಳಿತಾಧಿಕಾರಿ ಡಾ.ಎನ್.ಕೆ.ವೆಂಕಟೇಗೌಡ, ಪ್ರಾಂಶುಪಾಲ ನಾಗೇಶ್ ಹಾಜರಿದ್ದರು.

ಭೈರವೈಕ್ಯ ಶ್ರೀಗಳ ಪಟ್ಟಾಭಿಷೇಕ ನೆನಪಿಗಾಗಿ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಪಾಂಡವಪುರಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 54ನೇ ವರ್ಷದ ಪಟ್ಟಾಭಿಷೇಕದ ನೆನೆಪಿಗಾಗಿ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮ ನಡೆಯಿತು.

ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಜೀವನ ಶೈಲಿ ಸರಿಯೇ, ಆಧುನೀಕ ಜೀವನ ಶೈಲಿ ಸರಿಯೇ ಎಂಬ ವಿಚಾರ ಕುರಿತು ಚರ್ಚಿಸಲಾಯಿತು.ಹಾಸ್ಯನಟ ನರಸಿಂಹಜೋಶಿ ಕಾರ್ಯಮದ ನಿರ್ವಹಣೆ ಮಾಡಿದರು. ಹಿಂದಿನ ಜೀವನ ಶೈಲಿಯೇ ಸರಿ ಎಂಬ ವಿಷಯ ಕುರಿತು ಜನನಿ, ತ್ರಿಷಿಕಗೌಡ, ರುಚಿತ, ವಿದ್ಯಾಶ್ರೀ, ನೂತನ್ ವಾಧಿಸಿದರು. ಆಧುನೀಕ ಜೀವನ ಶೈಲಿಯೇ ಸರಿ ಎಂಬುದಾಗಿ ವಿದ್ಯಾರ್ಥಿಗಳಾದ ಲೇಖನಾ, ದೃತಿ, ಹರ್ಷಲ, ಗಾನವಿ, ಮದನ್ ಗೌಡ ಅವರು ವಾದಿಸಿದರು.

ಹಿಂದಿನ ಶೈಲಿಯ ಹಬ್ಬಗಳು, ದಿನಚರಿ, ಆಹಾರ, ಶಿಕ್ಷಣ, ತಂತ್ರಜ್ಞಾನ, ವ್ಯವಸಾಯ, ಸಂಸ್ಕೃತಿ, ಸಂಸ್ಕಾರ, ಪರಿಸರ ಸಂರಕ್ಷಣೆ, ವಾಯುಮಾಲಿನ್ಯ, ನೀರು ಸಂರಕ್ಷಣೆ, ಬಳಕೆ, ಉಡುಪುಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಸುಮಾರು 2 ಗಂಟೆಗೂ ಅಧಿಕಕಾಲ ಮಕ್ಕಳ ಚರ್ಚೆ ನಡೆಯಿತು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಳೇ ಶೈಲಿ ಹಾಗೂ ಆಧುನೀಕ ಶೈಲಿ ಹಾಡು, ನೃತ್ಯಗಳು, ಆಹಾರ, ಸಿಹಿ ತಿನ್ನಿಸುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಭೈರವೈಕ್ಯ ಶ್ರೀಗಳ ಪಟ್ಟಾಭಿಷೇಕದ ನೆನೆಪಿಗಾಗಿ ಈಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಬಿಜೆಪಿ ಅಧ್ಯಕ್ಷ ಧನಂಜಯ್, ಕಾಂಗ್ರೆಸ್ ಮುಖಂಡ ಎಲ್.ಸಿ.ಮಂಜುನಾಥ್, ಎಲ್.ಅಶೋಕ್, ಅಶ್ವಥ್ ಕುಮಾರೇಗೌಡ, ಮೇನಾಗರ ಪ್ರಕಾಶ್, ಬಿ.ಎಸ್.ಜಯರಾಮು, ನಾಗಸುಂದರ್, ಪ್ರಾಂಶುಪಾಲ ರಘು, ಮುಖ್ಯಶಿಕ್ಷಕಿ ಚಂಪಕ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ವಿಶ್ವಕರ್ಮ ಮಹೋತ್ಸವ ಆಚರಣೆಗೆ ಸಿದ್ಧತೆ
ರೈಲ್ವೆ ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ ಆರೋಪ