ಸ್ಪರ್ಧಾಳುಗಳಿಗೆ ಆತ್ಮಸ್ಥೈರ್ಯ, ತಾಳ್ಮೆ ಅಗತ್ಯ: ಅಕ್ಷಯ ಪಾಟೀಲ

KannadaprabhaNewsNetwork |  
Published : Dec 23, 2025, 02:15 AM IST
ಸ್ಲೋ ಬೈಕ್ ಓಡಿಸುವ ಸ್ಪರ್ಧೆಗೆ ಅಕ್ಷಯ ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

ಸ್ಪರ್ಧಾಳುಗಳು ಮುಖ್ಯವಾಗಿ ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವಾಗ ಅವರಲ್ಲಿರುವ ಆತ್ಮಸ್ಥೈರ್ಯ ಅವರಿಗೆ ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತದೆ. ಜತೆ ತಾಳ್ಮೆಯು ಬಹಳ ಅಗತ್ಯವಾಗಿರುತ್ತದೆ.

ನರೇಗಲ್ಲ: ಸ್ಪರ್ಧಾಳುಗಳು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದರೆ ಆತ್ಮಸ್ಥೈರ್ಯ ಮತ್ತು ತಾಳ್ಮೆ ಅಗತ್ಯವಾಗಿರುತ್ತದೆ. ಅಂದಾಗ ಒಳ್ಳೆಯ ಫಲಿತಾಂಶವನ್ನು ಕಾಣಲು ಸಾಧ್ಯ ಎಂದು ರಾಜ್ಯ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಕ್ಷಯ ಪಾಟೀಲ ತಿಳಿಸಿದರು.ಸಮೀಪದ ಹಾಲಕೆರೆ ಗ್ರಾಮದ ಅನ್ನದಾನ ಮಹಾ ಶಿವಯೋಗಿಗಳ 175ನೇ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನದಾನೇಶ್ವರ ಗೆಳೆಯರ ಬಳಗದ ವತಿಯಿಂದ ನಡೆದ ಸ್ಲೋ ಬೈಕ್ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾಳುಗಳು ಮುಖ್ಯವಾಗಿ ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವಾಗ ಅವರಲ್ಲಿರುವ ಆತ್ಮಸ್ಥೈರ್ಯ ಅವರಿಗೆ ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತದೆ. ಜತೆ ತಾಳ್ಮೆಯು ಬಹಳ ಅಗತ್ಯವಾಗಿರುತ್ತದೆ. ಇದು ಕೇವಲ ಕ್ರೀಡೆಗೆ ಮಾತ್ರ ಸೀಮಿತವಾದದ್ದಲ್ಲ. ಇದು ಜೀವನಕ್ಕೂ ಬಹಳ ಅತಿ ಮುಖ್ಯವಾಗಿರುವ ಅಂಶ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಭಿಮಾನ ಮೂಡುವ ಜತೆಗೆ ಮಾನಸಿಕ ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ ಎಂದರು.ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿ, ಯುವಕರಲ್ಲಿ ಕ್ರೀಡಾಭಿಮಾನ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಕ್ರೀಡಾಪಟುಗಳು ಮೊದಲು ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿರುತ್ತದೆ ಎಂದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಮುದುಕಪ್ಪ ಪ್ರಭಣ್ಣವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಯುವಕರು ಕೇವಲ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಕೈಗೊಂಬೆಯಾಗಿದ್ದು, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಉತ್ತೇಜಿಸುವುದು ಕ್ರೀಡೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಗಿರೀಶ ಗೌಡ್ರ ಮುಲ್ಕಿಪಾಟೀಲ, ರಮೇಶ್ ಕುರಿ, ಶರಣಪ್ಪ ನವಲಗುಂದ, ಮಹೇಶ ಕುರಿ, ಪ್ರವೀಣ ಬೈರಗೊಂಡ, ಅಯ್ಯನಗೌಡ್ರು ಯಲ್ಲಪ್ಪಗೌಡ್ರು, ಆನಂದ ಹಳ್ಳಿ, ಬಸವರಾಜ ಮೇಟಿ, ನವೀನ ಮಾದಿನೂರ, ರಾಘು ಕುರಿ, ಮಂಜು ಕರಡಿ, ಶಿವು ಶಿರೂರ, ಕುಮಾರ ಕರಡಿ, ಗುರುರಾಜ ಬಂಡಿಹಾಳ, ಬಸವರಾಜ ಸಸಬಾಳ, ಸಾಗರ ಅಂಗಡಿ, ಮಂಜುನಾಥ ನವಲಗುಂದ ಹಾಗೂ ಅನ್ನದಾನೇಶ್ವರ ಗೆಳೆಯರ ಬಳಗದ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ತಲಾದಾಯ ಹೆಚ್ಚಳ
ಮರ್ಯಾದೆಗೆಡು ಹತ್ಯೆ: 18 ಜನರ ಮೇಲೆ ಪ್ರಕರಣ ದಾಖಲು