ಹರಿಹರ: ಲೋಕೋಪಯೋಗಿ ಸಚಿವರ ವಿರುದ್ಧ ಸ್ಪೀಕರ್ ಅವರಿಗೆ ಹಕ್ಕುಚ್ಯುತಿ ಮಂಡನೆಗೆ ದೂರು ನೀಡಲಾಗಿದೆ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಹೇಳಿದರು.
ನಗರದಲ್ಲಿ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಹಲವು ಕಾಮಗಾರಿಗಳಿಗೆ ಕಾಂಗ್ರೆಸ್ ಮುಖಂಡರು ಗುದ್ದಲಿ ಪೂಜೆ ನೆರವೇರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ರಾಜಕೀಯ ಅನುಭವ ಕೊರತೆ ಹಾಗೂ ಪರಿಜ್ಞಾನ ಇಲ್ಲದವರು ಈ ತರದ ಕೆಲಸ ಮಾಡುತ್ತಾರೆ ಎಂದು ಪರೋಕ್ಷವಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ನಂದಿಗಾವಿ ಅವರೆಡೆ ಬೆರಳು ಮಾಡಿದರು.
ಈಗಾಗಲೇ ದೂಡಾ ಅಧಿಕಾರಿಗಳು ಹಕ್ಕುಚ್ಯುತಿ ಕೇಸಲ್ಲಿ ಬೆಂಗಳೂರಿಗೆ ಅಲೆದಾಡುತ್ತಿದ್ದಾರೆ. ಈಗ ಮತ್ತು ಅದೇ ತಪ್ಪುಗಳನ್ನು ಮಾಡಿ ಪ್ರೋಟೋಕಾಲನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರಿಗೆ ಏನು ಹೇಳಬೇಕು ಹೇಗೆ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.- - -
-21HRR.02:ಹರಿಹರದ ಶಿವಮೊಗ್ಗ ರಸ್ತೆಯಲ್ಲಿ ನಡೆಯುತ್ತಿರುವ ಟಾರ್ ರಸ್ತೆ ಕಾಮಗಾರಿಯನ್ನು ಶಾಸಕ ಬಿ.ಪಿ ಹರೀಶ್
ವೀಕ್ಷಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.