ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ರೋಹಿತ್ ಜೈನ್

KannadaprabhaNewsNetwork |  
Published : Dec 14, 2024, 12:48 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬೆಂಗಳೂರು- ಪುಣೆ ಜಂಕ್ಷನ್ ರೈಲು ಮಾರ್ಗದಲ್ಲಿ ಬಾಕಿಯಿರುವ ದ್ವಿಪಥ ಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಯಲ್ಲಿ ಇದೇ ಡಿಸೆಂಬರ್ ಒಳಗೆ ಮುಗಿಸುವಂತೆ ನೈರುತ್ಯ ರೈಲ್ವೆ ಮ್ಯಾನೇಜರ್ ಅವರಿಗೆ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಮನವಿ ಮಾಡಿದ್ದಾರೆ.

ದಾವಣಗೆರೆ: ಬೆಂಗಳೂರು- ಪುಣೆ ಜಂಕ್ಷನ್ ರೈಲು ಮಾರ್ಗದಲ್ಲಿ ಬಾಕಿಯಿರುವ ದ್ವಿಪಥ ಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಯಲ್ಲಿ ಇದೇ ಡಿಸೆಂಬರ್ ಒಳಗೆ ಮುಗಿಸುವಂತೆ ನೈರುತ್ಯ ರೈಲ್ವೆ ಮ್ಯಾನೇಜರ್ ಅವರಿಗೆ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಮನವಿ ಮಾಡಿದ್ದಾರೆ. ಬೆಂಗಳೂರು-ಪುಣೆ ಜಂಕ್ಷನ್ ಹಾಗೂ ಪುಣೆ ಜಂಕ್ಷನ್‌ನಿಂದ ಮುಂದೆ ಪ್ರತಿದಿನ ಸುಮಾರು 40 ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲು ಗಾಡಿಗಳು ಸಾಗುತವೆ. ಈ ಮಾರ್ಗದ ರೈಲು ಹಳಿಗಳ ಮೇಲೆ ಒತ್ತಡ ಜಾಸ್ತಿ ಆಗಿದೆ. ಪ್ರಯಾಣಿಕರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ. ಆದ್ದರಿಂದ ಬೆಂಗಳೂರು- ಪುಣೆ ಜಂಕ್ಷನ್ ಮಾರ್ಗದ ಬಾಕಿ ಇರುವ (ಮಿರಜ್, ಸಾಂಗ್ಲಿ, ಪುಣೆ) ರೈಲು ಮಾರ್ಗವನ್ನು ಮಾರ್ಚ್ 2025 ರೊಳಗೆ ಆದ್ಯತೆ ಮೇರೆಗೆ ಆದಷ್ಟು ಬೇಗನೆ ದ್ವಿಪಥ ಮಾರ್ಗ ಹಾಗೂ ವಿದ್ಯುದೀಕರಣ ಮುಗಿಸಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಬೆಳಗಾವಿ-ಬೆಂಗಳೂರು ವಯಾ ದಾವಣಗೆರೆ - ಸೆಮಿ ಹೈ ಸ್ಪೀಡ್ ರೈಲು ವಂದೇ ಭರತ್ ರೈಲ್‌ ಅನ್ನು ಆದಷ್ಟು ಬೇಗ ಓಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ