ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕಿನ ಕೆಲ್ಲಹಳ್ಳಿ, ಗುಜ್ಜೇಗೌಡನಪುರ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ 1 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ, ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲ್ಲಹಳ್ಳಿ ಗ್ರಾಮದಲ್ಲಿ ಈಗಾಗಲೆ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಬಾಕಿ ಇರುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು.
ಕೆರೆಗೆ ನೀರನ್ನು ಬಿಡಲು ಪೈಪ್ ಲೈನ್ ಒಡೆದು ಹೋಗಿತ್ತು. ಹೊಸದಾಗಿ ಪೈಪ್ ಲೈನ್ ಮಾಡಲು ಟೆಂಡರ್ ಆಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭ ಮಾಡಿ ಶೀಘ್ರವಾಗಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ನಂತರ ಗುಜ್ಜೇಗೌಡನಪುರ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರಲ್ಲದೆ, ಗುಜ್ಜೇಗೌಡನಪುರ ಗ್ರಾಮದಲ್ಲಿ ಇನ್ನು ಮೂರು ರಸ್ತೆಗಳು ಮಾತ್ರ ಬಾಕಿದ್ದು, ಈ ರಸ್ತೆಗಳನ್ನು ಈ ಅನುದಾನದಲ್ಲಿ ಕೈಗೊಳ್ಳುತ್ತಿದ್ದು, ಗುಜ್ಜೇಗೌಡನಪುರವು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ ಎಂದು ಅವರು ತಿಳಿಸಿದರು.
ಮುಖಂಡರಾದ ಜಯಪುರ ಜವರನಾಯಕ, ದಾರಿಪುರ ಬಸವಣ್ಣ, ಮುತಾಲಿಕ್, ಶ್ರೀಕಾಂತ್, ರೇಣುಕಾ, ಶಿವರಾಜು, ರಂಗಸ್ವಾಮಿ, ಕೆಲ್ಲಹಳ್ಳಿ ಗ್ರಾಮದ ವಿಜಯ್, ನಾಗರಾಜು, ಭೈರೇಶ್, ಮಂಜು, ನಿಂಗರಾಜು, ಹಾರೋಹಳ್ಳಿ ಮೂರ್ತಿ, ಮಹಾದೇವಪ್ಪ, ಚಂದ್ರ, ಚೆನ್ನಕೇಶವೇಗೌಡ, ಸಿದ್ದರಾಜು, ಶಂಭಯ್ಯ, ಮದ್ದೂರಿನ ಶಿವಣ್ಣ, ಕೆಂಡಗಣ್ಣ, ಹರೀಶ್, ಶ್ರೀಧರ್, ಮಹೇಂದ್ರ, ರಘು, ಗುರುಸ್ವಾಮಿ ಮೊದಲಾದವರು ಇದ್ದರು.