18ರಂದು ರಾಜ್ಯದಲ್ಲೇ ಪ್ರಥಮ ಕ್ಲಾಸ್‌ ಆನ್‌ ವ್ಹೀಲ್ಸ್‌ ಡಿಜಿಟಲ್‌ ಬಸ್‌ ಲೋಕಾರ್ಪಣೆ

KannadaprabhaNewsNetwork | Published : Nov 16, 2023 1:16 AM

ಸಾರಾಂಶ

ರಾಜ್ಯದಲ್ಲೇ ಪ್ರಥಮ ಕ್ಲಾಸ್ಸ್‌ ಆನ್ನ್‌ ವ್ಹೀಲ್ಸ್ಲ್ಸ್‌ ಡಿಜಿಟಲ್ಲ್‌ ಬಸ್ಸ್‌ ೧೮ರಂದು ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಮಂಗಳೂರು

ಎಂ.ಫ್ರೆಂಡ್ಸ್‌ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಕ್ಲಾಸ್‌ ಆನ್‌ ವ್ಹೀಲ್ಸ್‌ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್‌ ಸಾಕ್ಷರತೆಯ ಡಿಜಿಟಲ್‌ ಬಸ್‌ಗೆ ಹಸಿರು ನಿಶಾನೆ ನೀಡುವ ಕಾರ್ಯಕ್ರಮ ನ.18ರಂದು ಬೆಳಗ್ಗೆ 8.45 ಕ್ಕೆ ನಗರದ ಜಪ್ಪುವಿನ ಮರಿಯ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ರಶೀದ್‌ ವಿಟ್ಲ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಯು.ಟಿ.ಖಾದರ್‌ ಅವರು ಡಿಜಿಟಲ್‌ ಬಸ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ದ.ಕ. ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಡಿ.ಆರ್‌. ನಾಯಕ್‌, ಯೇನಪೋಯ ವಿಶ್ವವಿದ್ಯಾನಿಲಯ ಕುಲಪತಿ ಡಾ.ವೈ. ಅಬ್ದುಲ್ಲ ಕುಂಞ, ಕ್ಲೌಡ್‌ ಮತ್ತು ಇನ್ಪಾಸ್ಟ್ರಕ್ಚರ್‌ ಮಹಮ್ಮದ್‌ ಬಿನ್‌ ರಾಶಿದ್‌ ಸ್ಪೇಸ್‌ ಸೆಂಟರ್‌ ಲ್ಯಾಬ್‌ ಯುಎಇ ಇದರ ಮೆನೇಜರ್‌ ಮಹಮ್ಮದ್‌ ಹನೀಫ್‌ ಪುತ್ತೂರು ಭಾಗವಹಿಸಲಿದ್ದಾರೆ ಎಂದರು.ಜಿಲ್ಲೆಗೂ ವಿಸ್ತರಣೆ: ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್‌ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರಿನ ಈ ಸೇವಾ ಸಂಸ್ಥೆ ಡಿಜಿಟಲ್‌ ಬಸ್‌ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕ್ಲಾಸ್‌ ಆನ್‌ ವ್ಹೀಲ್ಸ್‌ ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್‌ನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ಸೇವೆಯೊಂದಿಗೆ ಕಾರ್ಯಾಚರಿಸಲಿದೆ. ವಾರ್ಷಿಕ ಐದು ಸಾವಿರ ಮಕ್ಕಳಿಗೆ ಕಂಪ್ಯೂಟರ್‌ನ ಮೂಲಭೂತ ಶಿಕ್ಷಣ ನೀಡುವ ಗುರಿ ಹೊಂದಿದೆ ಎಂದರು.

ಒಬ್ಬ ವಿದ್ಯಾರ್ಥಿಗೆ 15 ಗಂಟೆಯ ಬೇಸಿಕ್‌ ಕಂಪ್ಯೂಟರ್‌ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್‌ ಹನೀಫ್‌ ಹಾಜಿ, ಕೋಶಾಧಿಕಾರಿ ಅಬೂಬಕರ್‌ ಕೆ., ಕಾರ್ಯದರ್ಶಿ ಮುಹಮ್ಮದ್‌ ಆರಿಫ್‌ ಪಡುಬಿದ್ರಿ, ಟ್ರಸ್ಟಿ ಅಬೂಬಕ್ಕರ್‌ ಪುತ್ತು ಇದ್ದರು.

Share this article