ಸಂಸದರ ಅಮಾನತು ಖಂಡಿಸಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರೋಧಿ ನೀತಿ ಖಂಡಿಸಿ ರಾಜ್ಯ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಬಿಜೆಪಿಯವರು ಸಂಸದರನ್ನು ಅಮಾನತ್ತು ಮಾಡುವ ಮೂಲಕ ದೇಶದ ಅವನತಿಗೆ ನಾಂದಿ ಹಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಗಾರೇಶ ಹಿರೇಮಠ, ಅಳ್ನಾವರ ಸುರೇಶ ಗೌಡ, ಚಂದ್ರಶೇಖರ ಜುಟ್ಟಲ, ವಸಂತ ಲದವಾ ಮಾತನಾಡಿದರು. ಪ್ರತಿಭಟನೆಯಲ್ಲಿ ಮೋಹನ ಹಿರೇಮನಿ, ವೀರಣ್ಣ ನೀರಲಗಿ, ರವೀಂದ್ರ ಕಲ್ಯಾಣಿ, ನಾಗೇಶ ವಾಳ್ವೇಕರ, ಸುರೇಶಗೌಡ ಕರಿಗೌಡರ, ಸತೀಶ ಮೆಹರವಾಡೆ, ಇಕ್ಬಾಲ ನವಲೂರ, ವಿ.ಕೆ. ಹಿರೇಗೌಡರ, ಎಸ್.ಎಸ್. ಪಾಟೀಲ, ಮಲ್ಲೇಶ ಉಪ್ಪಾರ, ನಂಜಪ್ಪ ನಲವಡಿ, ಮಂಜುನಾಥ ಬಳ್ಳಾರಿ ಸೇರಿದಂತೆ ಹಲವರಿದ್ದರು.