ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣಕ್ಕೆ ಖಂಡನೆ

KannadaprabhaNewsNetwork |  
Published : Aug 27, 2026, 02:45 AM IST
26ುಲು20 | Kannada Prabha

ಸಾರಾಂಶ

ಬದಲಾಗಿ ಜಾತಿ ಆಧಾರಿತ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮನಸ್ಥಿತಿ ಪ್ರತಿಬಿಂಬಿಸುವ ಕೃತ್ಯ

ಗಂಗಾವತಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಮಾಡಿರುವದಕ್ಕೆ ದಲಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ದಲಿತ ಹಿರಿಯ ಮುಖಂಡ ಹುಲುಗಪ್ಪ ಮಾಗಿ, ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಎರಡು ದಿನಗಳ ಬಳಿಕ ಅವರು ಕುಳಿತಿದ್ದ ವೇದಿಕೆ ಕೆಲವರು ನೀರಿನಿಂದ ಶುದ್ಧೀಕರಿಸಿರುವದಕ್ಕೆ ಅಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯ ಕೃತ್ಯ ಕೇವಲ ಒಬ್ಬ ರಾಜಕೀಯ ನಾಯಕನಿಗೆ ಮಾಡಿದ ಅವಮಾನವಲ್ಲ. ಬದಲಾಗಿ ಜಾತಿ ಆಧಾರಿತ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮನಸ್ಥಿತಿ ಪ್ರತಿಬಿಂಬಿಸುವ ಕೃತ್ಯವಾಗಿದ್ದು, ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹಂಪೇಶ ಹರಿಕೋಲು, ಶಿವಪ್ಪ ಮಾದಿಗ, ಅಂಬಣ್ಣ , ದುರಗೇಶ ಸಂಗಾಪುರ, ಪಂಪಾಪತಿ ಸಿದ್ದಾಪುರ, ಹೊನ್ನೂರಪ್ಪ, ಫಕೀರಪ್ಪ ಬೋವಿ, ಗಂಗಣ್ಣ ಸಿದ್ದಾಪುರ, ಮರಿಸ್ವಾಮಿ, ಶಂಕರ್ ಸಿದ್ದಾಪುರ, ಅಂಜಿನಯ್ಯ ಸೋಮನಾಳ, ಹುಲ್ಲೇಶ್ ಕೊಜಿ, ಗಣೇಶ್ ಮಚ್ಚಿ, ಜಂಬಣ್ಣ. ಚಂದ್ರು ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಾಸ ಸೌಹಾರ್ದ ಕೋ​ ಆಪರೇಟಿವ್ ಬ್ಯಾಂಕ್ ಶೇ. 16 ಡಿವಿಡೆಂಡ್ ಘೋಷಣೆ
ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮದಿಂದ ಈದ್‌ ಮಿಲಾದ್‌ ಆಚರಣೆ