ಕನ್ನಡಪ್ರಭ ವಾರ್ತೆ ಹುಣಸೂರು
ರೋಟರಿ ಶಾಲೆಯಲ್ಲಿ ಮಂಗಳವಾರ ಕನ್ನಡಪ್ರಭ ದಿನಪತ್ರಿಕೆಯು ಅರಣ್ಯ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ವನ್ಯಜೀವಿ ಮತ್ತು ಅರಣ್ಯ ವಿಷಯ ಕುರಿತು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವಾಗಲೂ ನಮ್ಮ ಆಲೋಚನಾ ಕ್ರಮವು ಏಕಮುಖವಾಗಿ ಇರುತ್ತದೆ. ಪ್ರಾಣಿಯೊಂದಕ್ಕೆ ಅಥವಾ ಮರಗಳಿಗೆ ಡಿಕ್ಕಿ ಹೊಡೆದು ಅಪಘಾತವಾದಾಗಲೂ ನಮ್ಮ ವಾಹನಗಳಿಗೆ ಏನಾಯಿತು ಎಂದು ನೋಡುತ್ತೇವೆಯೇ ಹೊರತು ಪ್ರಾಣಿಗಳಿಗೆ ಏನಾಯಿತು, ಮರ- ಗಿಡಗಳಿಗೆ ಏನಾಯಿತು ಎಂದು ನೋಡುವುದಿಲ್ಲ ಎಂದರು.ಹೀಗೆ ಮನುಷ್ಯ ಸ್ವಾರ್ಥವಾಗಿ ಯೋಚಿಸುತ್ತಿರುವುದರಿಂದ ಅನೇಕ ಸಮಸ್ಯೆ ಉಂಟಾಗುತ್ತಿದೆ. ನಾವು ಪ್ರಾಣಿಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕು. ನಮ್ಮಂತೆಯೇ ಇತರ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ರೋಟರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿ, ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದಿಲ್ಲ. ಪ್ರಾಣಿಗಳಿಗೆ ಮತದಾನದ ಹಕ್ಕಿದ್ದರೆ ನಮ್ಮ ಜನಪ್ರತಿನಿಧಿಗಳು ಅವುಗಳ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ಈಗ ನಮ್ಮ ಕನ್ನಡಪ್ರಭ ದಿನಪತ್ರಿಕೆಯು ಮಕ್ಕಳಲ್ಲಿ ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಭಾಗವಾಗಿ ಇಂತಹ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಇಸಿಒ ಸುನಿಲ್ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂದು ಹೇಳುತ್ತಾರೆ. ಹಾಗೆ ತಾವು ಬಿಡಿಸುವ ಚಿತ್ರವು ಕೇವಲ ಚಿತ್ರವಾಗಿರದೆ ವನ್ಯಜೀವಿಗಳು ಮತ್ತು ಅವುಗಳ ಸಂರಕ್ಷಣೆಯ ಭಾಗವಾಗಿರಲಿ ಎಂದು ಆಶಿಸಿದರು.
ಸಹ ಶಿಕ್ಷಕಿ ಎ. ಶ್ರುತಿ ಪ್ರಾರ್ಥಿಸಿದರು. ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಿ.ಎನ್. ಹರೀಶ್ ನಿರೂಪಿಸಿದರು. ಸಹ ಶಿಕ್ಷಕ ಎಚ್.ಎಂ. ಲೋಕೇಶ್ ಸ್ವಾಗತಿಸಿದರು.
ಬಹುಮಾನ ವಿತರಣೆ:
10ನೇ ತರಗತಿ ವಿಭಾಗದಲ್ಲಿ ಎನ್.ಬಿ. ಜಯಲಕ್ಷ್ಮೀ - ಪ್ರಥಮ, ಎಸ್. ರಾಹಿನ್ - ದ್ವಿತೀಯ ಮತ್ತು ಸ್ವಪ್ನ- ತೃತೀಯ ಸ್ಥಾನ ಪಡೆದರು.