ಬಿಜೆಪಿಯಲ್ಲಿನ ಗೊಂದಲ ಹೈಕಮಾಂಡ್‌ ಬಗೆಹರಿಸುತ್ತದೆ: ಶೆಟ್ಟರ

KannadaprabhaNewsNetwork |  
Published : Dec 02, 2024, 01:17 AM IST
xcvcv | Kannada Prabha

ಸಾರಾಂಶ

ಬಿಜೆಪಿಯಲ್ಲಿ ಎಲ್ಲವೂ ಗೊಂದಲಮಯವಾಗಿದ್ದು, ಪಕ್ಷದ ಹೈಕಮಾಂಡ್‌ ಶೀಘ್ರದಲ್ಲೇ ಗೊಂದಲ ನಿವಾರಿಸುತ್ತಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬ​ಳ್ಳಿ: ಬಿ​ಜೆ​ಪಿ​ಯಲ್ಲಿ ಎ​ಲ್ಲವೂ ಗೊಂದ​ಲ​ಮ​ಯ​ವಾ​ಗಿ​ದ್ದು, ಪಕ್ಷದ ಹೈಕಮಾಂಡ್‌ ಶೀಘ್ರದಲ್ಲೇ ಗೊಂದಲ ನಿವಾರಿಸುತ್ತಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿ​ಜೆ​ಪಿ​ಯ​ಲ್ಲಿನ ಗೊಂದವನ್ನು ದೆ​ಹಲಿ ವ​ರಿ​ಷ್ಠರು ಸೂಕ್ಷ್ಮವಾಗಿ ಗ​ಮ​ನಿ​ಸು​ತ್ತಿ​ದ್ದಾ​ರೆ. ಬಿ​ಜೆ​ಪಿ​ಯಲ್ಲಿ ಗೊಂದಲ ಇ​ರು​ವುದು ಸತ್ಯ. ಆ​ದರೆ ನಿ​ವಾ​ರಿ​ಸುವ ಶಕ್ತಿ ಹೈ​ಕ​ಮಾಂಡ್‌ಗೆ ಮಾತ್ರ ಇದೆ. ಆ​ದಷ್ಟು ಬೇಗ ವ​ರಿ​ಷ್ಠರು ಸ​ರಿ​ಯಾದ ಕ್ರಮ ಕೈ​ಗೊ​ಳ್ಳು​ತ್ತಾ​ರೆ ಎಂದರು.

ವಿಜಯೇಂದ್ರ ಪರವಾಗಿ ಮಾಜಿ ಶಾ​ಸ​ಕರು ಸಭೆ ನ​ಡೆಸಿರುವ ವಿ​ಚಾ​ರದ ಕು​ರಿತು ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿದ ಶೆ​ಟ್ಟರ್‌, ನಾನು ಯಾರ ಪ​ರ​ವಾ​ಗಿಯೂ ಮಾ​ತ​ನಾ​ಡು​ವು​ದಿಲ್ಲ. ಪ​ಕ್ಷ​ದ​ ವ್ಯ​ವ​ಸ್ಥೆ​ಯನ್ನು ಸರಿಪ​ಡಿ​ಸುವ ಕೆ​ಲ​ಸ​ ಹೈ​ಕ​ಮಾಂಡ್‌ ಮಾ​ಡ​ಬೇ​ಕಿದೆ ಎಂದ​ರು.

ಕಾಂಗ್ರೆಸ್‌ನ​ಲ್ಲಿಯೂ ಸಾ​ಕಷ್ಟು ಅ​ಸ​ಮಾ​ಧಾನ ಮತ್ತು ಒ​ಳ​ಜ​ಗ​ಳ​ಗ​ಳಿದ್ದು, ಅ​ದು ಯಾ​ವಾಗ ಹೊರ ಬೀ​ಳುತ್ತೋ ಗೊತ್ತಿಲ್ಲ. ಸಿಎಂ ಸಿ​ದ್ದ​ರಾ​ಮ​ಯ್ಯ ಅ​ವ​ರನ್ನು ಕೆ​ಳ​ಗಿ​ಳಿಸಲು ಕೆ​ಲ​ವರು ಮುಂದಾ​ಗಿ​ದ್ದು, ಸ​ದ್ಯ​ದಲ್ಲೇ ಕಾಂಗ್ರೆಸ್‌ ಜ​ಗಳ ಬೀ​ದಿಗೆ ಬ​ರು​ವುದು ಗ್ಯಾ​ರಂಟಿ. ಹಾಸನದಲ್ಲಿ ಸಮಾವೇಶಕ್ಕೆ ಅವರಲ್ಲೇ ಅಪಸ್ವರ ಕೇಳಿ ಬಂದಿದೆ ಎಂದು ಪ್ರ​ಶ್ನೆಯೊಂದಕ್ಕೆ ಪ್ರ​ತಿ​ಕ್ರಿ​ಯಿ​ಸಿ​ದ​ರು.

ಭ್ರಷ್ಟಾಚಾರಕ್ಕೆ ಸ್ಪರ್ಧೆ

ರಾಜ್ಯ ಸ​ರ್ಕಾ​ರದ ಭ್ರ​ಷ್ಟಾ​ಚಾ​ರದ ವಿ​ಚಾ​ರ​ದಲ್ಲಿ ಸ​ಚಿ​ವರ ಮ​ಧ್ಯೆಯೇ ಕಾಂಪಿ​ಟೇ​ಶನ್‌ ನ​ಡೆ​ಯು​ತ್ತಿದೆ. ಭ್ರ​ಷ್ಟಾ​ಚಾ​ರ​ದಲ್ಲಿ ನಾನು ಹೆಚ್ಚೋ ನೀನು ಹೆಚ್ಚೋ ಎಂಬ ಲೆ​ಕ್ಕಾ​ಚಾರ ನ​ಡೆ​ದಿದೆ. ಆ​ಡ​ಳಿ​ತ​ದ​ಲ್ಲಿನ ಭ್ರ​ಷ್ಟಾ​ಚಾರ ನೋಡಿ ಸಾ​ಕಾ​ಗಿದೆ ಎಂದು ಹೇ​ಳಿ​ರುವ ಸ​ಚಿವ ಆ​ರ್‌.ಬಿ.​ ತಿ​ಮ್ಮಾಪುರ ಅ​ವರ ಇ​ಲಾ​ಖೆ​ಯಲ್ಲಿ ಭ್ರ​ಷ್ಟಾ​ಚಾರ ಕ​ಡಿ​ಮೆ​ಯಾ​ಗಿ​ದೆ​ಯಾ? ಎಂದು ಶೆ​ಟ್ಟರ್‌ ಪ್ರ​ಶ್ನಿ​ಸಿ​ದ​ರು. ವಕ್ಫ್‌ ಮ​ಸೂದೆ ತಿ​ದ್ದು​ಪ​ಡಿಯ ಅ​ವಧಿ ವಿ​ಸ್ತ​ರಣೆ ಮಾ​ಡ​ಲಾ​ಗಿದೆ. ಬ​ಜೆಟ್‌ ಅಧಿವೇಶನದ ​ವ​ರೆಗೂ ಅ​ವಧಿ ವಿ​ಸ್ತ​ರಣೆ ಮಾ​ಡ​ಲಾ​ಗಿದೆ. ಬ​ಜೆಟ್‌ ಅ​ಧಿ​ವೇ​ಶ​ನ​ದ​ ವರೆಗೆ ಯಾ​ವುದೇ ಬಿಲ್‌ ಅ​ನು​ಮೋ​ದ​ನೆ​ಯಾ​ಗಲ್ಲ ಎಂದು ಶೆ​ಟ್ಟರ ಹೇ​ಳಿ​ದ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌