ಕನ್ನಡಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ಇಂಗನಕಲ್ ಗ್ರಾಮದಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ನಂತರ ಮಾತನಾಡಿ, ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ರ್ಕಾರವಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ೫ ಗ್ಯಾರಂಟಿಗಳನ್ನು ಜಾರಿಗೊಳಿಸಿ ರಾಜ್ಯದ ಪ್ರತಿ ಕುಟುಂಬಕ್ಕೆ ಅನುಕೂಲ ಮಾಡಿಕೊಟ್ಟಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಕಾಂಗೆಸ್ ಪಕ್ಷದ ಅಭ್ಯರ್ಥಿಗೆ ಮತವನ್ನು ನೀಡಿದಲ್ಲಿ ಇನ್ನು ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಹಾಳಕಾಯಿ, ಎಪಿಎಂಸಿ ಮಾಜಿ ಸದಸ್ಯ ಶಿವರಾಜ ಪಾಟೀಲ ಕಲಗರ್ತಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅನಿಲ್ ಹುಣಚಿಕರ್, ರುಕ್ಮುಶಾ ದುಖಾನದಾರ, ಈರಣ್ಣ ದಂಡೋತಿ, ಪ್ರಭುಲಿಂಗ ಮಂಗಲಗಿ, ಹುಸೇನ್ ಪಟೇಲ್ ಮಾಲಿ ಬಿರಾದಾರ್, ಮಲ್ಕಪ್ಪ ತೆಂಗಳಿ, ಭೀಮರಾಯ ಕದ್ದರಗಿ, ಪರಮೇಶ್ವರ ಬೆನಕಿನಪಳ್ಳಿ, ಮೋಹನಂದ ಕಟ್ಟೀಮನಿ, ಹಾಜಿಸಾಬ ದುಖಾನದಾರ, ಮಲ್ಲಣ್ಣ ಕಂದಗೂಳ, ಸಿದ್ದಣ್ಣ ಮಗಿ, ಮಹಾದೇವ ಮಹಾಗಾಂವ, ಶಫಿ ಪಟೇಲ್ ಮಾಲಿ ಬಿರಾದಾರ್ ಸೇರಿದಂತೆ ಇತರರಿದ್ದರು.