ಕನ್ನಡಪ್ರಭ ವಾರ್ತೆ ಮಂಡ್ಯ
ಮುಸ್ಲಿಮರ ಬಗ್ಗೆ ಬಹಳ ವ್ಯಾಮೋಹ ಹೊಂದಿರುವ ಕಾಂಗ್ರೆಸ್ ಮತ್ತು ಎಡಪಂಥೀಯರು ದೇಶದ್ರೋಹಿ ಟಿಪ್ಪು ಸುಲ್ತಾನ್ನನ್ನೇ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಾರೆ ಎಂದು ಟೀಕಿಸಿದರು.
ಎಡಪಂಥೀಯರು ಮಹಾತ್ಮ ಗಾಂಧೀಜಿ ಬಗ್ಗೆ ಮಾತ್ರ ತಿರುಚದೆ ಸುಭಾಷ್ ಚಂದ್ರ ಬೋಸ್, ಬುದ್ಧ, ಬಸವಣ್ಣ, ಅಂಬೇಡ್ಕರ್ ಬಗ್ಗೆನೂ ತಮ್ಮ ತರ್ಕಕ್ಕೆ ಅನುಗುಣವಾಗಿ ತಿರುಚಿ ಹೈಜಾಕ್ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪು ಅವರ ವರೆಗೂ ಮುಂದುವರಿಯಿತು. ಕುವೆಂಪು ಮತ್ತು ಸ್ವಾಮಿ ವಿವೇಕಾನಂದರಿಗೂ ಹಿಂದೂ ಸಂಸ್ಕೃತಿಗೂ ಸಂಬಂಧವಿಲ್ಲ ಎಂದು ಬಿಂಬಿಸಲು ಹೊರಟರು. ಹಿಂದುತ್ವ ಮತ್ತು ಆಧ್ಯಾತ್ಮಿಕತೆಗೆ ವಿರೋಧಿ ಎಂದು ಬಿಂಬಿಸಿ ಸಮಾಜವಾದಿ ಎಂದು ಕರೆದರು ಎಂದರು.ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಕಾಲದಲ್ಲಿ 1 ಲಕ್ಷಕ್ಕೂ ಹೆಚ್ಚು ಹಿಂದೂಗಳು ಹಾಗೂ 70 ಸಾವಿರ ಕ್ರಿಶ್ಚಿಯನ್ರನ್ನು ಭೀಕರವಾಗಿ ನರಮೇಧ ಮಾಡಿದ್ದಾನೆ. ಹಲವು ಹಿಂದೂ ದೇವಾಲಯಗಳನ್ನು ಕೆಡವಿದ್ದಾನೆ. ಇಂತಹ ಮತಾಂಧನನ್ನು ಶೃಂಗೇರಿ ದೇವಸ್ಥಾನಕ್ಕೆ ದಾನ ಕೊಟ್ಟಿದ್ದಾನೆ ಎಂದು ಬಿಂಬಿಸಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.
ಟಿಪ್ಪು ಸುಲ್ತಾನ್ನ ಕ್ರೌರ್ಯವನ್ನು ತಡೆಯಲಾಗದೆ ಮೈಸೂರು, ಚಾಮರಾಜನಗರ ಮತ್ತು ಕೊಡಗಿನ ಒಕ್ಕಲಿಗರು ತಮಿಳುನಾಡಿಗೆ ಪಲಾಯನ ಮಾಡಿ ನೆಲೆಸಿದ್ದಾರೆ. ಇಸ್ಲಾಮಿಕ್ನವರಿಗೆ ಹಿಂದುಗಳು ನೆಮ್ಮದಿಯಾಗಿರುವುದು ಇಷ್ಟವಿಲ್ಲ. ಆದ್ದರಿಂದ ಅವರಿಗೆ ಹಿಂದೂ ದೇವರ ಕಂಡರೆ ಆಗಲ್ಲ, ಹಾಗಾಗಿ ಗಣೇಶ ವಿಸರ್ಜನಾ ಮಹೋತ್ಸವದ ವೇಳೆ ಗಲಾಟೆ ಮಾಡುತ್ತಾರೆ ಎಂದು ಆರೋಪಿಸಿದರು.