ತುರ್ತು ಪರಿಸ್ಥಿತಿ ಹೇರಿ ಕಾಂಗ್ರೆಸ್‌ನಿಂದ ಸಂವಿಧಾನ ಹತ್ಯೆ: ಎನ್‌. ಮಹೇಶ್‌

KannadaprabhaNewsNetwork | Published : Jun 25, 2025 11:47 PM

ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿರವರು ಸಂವಿಧಾನಕ್ಕೆ ಬೀಗ ಹಾಕಿ, ರಾಷ್ಟ್ರವನ್ನು ಕತ್ತಲೆಗೆ ದೂಡಿ ಸರ್ವಾಧಿಕಾರಿ ಆಡಳಿತ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿ, ಜನರ ಹಕ್ಕುಗಳನ್ನು ದಮನ ಮಾಡಿ ಆಡಳಿತ ನಡೆಸಿದ ಇಂದಿರಾ ಗಾಂಧಿರವರು 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದ್ದು, ಸಂವಿಧಾನವನ್ನು ಹತ್ಯಾ ಮಾಡಿದ ದಿನವಾಗಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ಟೀಕಿಸಿದರು.ನಗರದಲ್ಲಿ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕ ಬುಧವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿರವರು ಸಂವಿಧಾನಕ್ಕೆ ಬೀಗ ಹಾಕಿ, ರಾಷ್ಟ್ರವನ್ನು ಕತ್ತಲೆಗೆ ದೂಡಿ ಸರ್ವಾಧಿಕಾರಿ ಆಡಳಿತ ನಡೆಸಿದ್ದರು. ಆ ಪಕ್ಷದ ನಾಯಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಭಾರತದಲ್ಲಿ ಆ ಸಮಯದಲ್ಲಿ ಹಣಕಾಸಿನ ಮುಗ್ಗಟ್ಟು ಇರಲಿಲ್ಲ, ರಾಜ್ಯ- ರಾಜ್ಯಗಳ ನಡುವೆ ಯಾವುದೇ ವ್ಯಾಜ್ಯವೂ ಇರಲಿಲ್ಲ. ಯುದ್ದ ಪರಿಸ್ಥಿತಿ ಅಥವಾ ಬಾಹ್ಯ ಆಕ್ರಮಣವೂ ಇರಲಿಲ್ಲ. ಆದರೂ ಇಂದಿರಾರವರು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದರು. ಇಂದಿಗೂ ಕಾಂಗ್ರೆಸ್ ನಾಯಕರು ಸರ್ವಾಧಿಕಾರ ಮನಸ್ಥಿತಿಯಿಂದ ಹೊರ ಬಂದಿಲ್ಲ ಎಂದರು.1971ರಲ್ಲಿ ನಡೆದ ಚುನಾವಣೆಯಲ್ಲಿ ರಾಯಬರೇಲಿಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲಹಾಬಾದ್ ನ್ಯಾಯಾಲಯ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿತ್ತು. ಇದು ಅವರಿಗೆ ಬರಸಿಡಿಲು ಬಡಿದಂತಾಗಿತ್ತು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಜೂ. 20ರಂದು ತೀರ್ಪಿನ ವಿರುದ್ಧ ಬೃಹತ್ ಪ್ರತಿಭಟನೆ ಮಾಡುತ್ತಾರೆ. ಜೂ. 24ರಂದು ನ್ಯಾಯಾಲಯ ಇಂದಿರಾ ಅವರಿಗೆ ಪ್ರಧಾನಿಯಾಗಿ ಮುಂದುವರೆಯಬಹುದು, ಸಂಸದೀಯ ಪಟುವಾಗಿ ಭಾಗವಹಿಸಿ ಚರ್ಚೆ ನಡೆಸುವಂತಿಲ್ಲ. ಮತದಾನ ಹಕ್ಕು ಇರುವುದಿಲ್ಲ ಎಂದು ಷರತ್ತುಬದ್ಧ ತಡೆ ನೀಡಿತು. ಆದರೂ ಸಹ ಜೂ. 25ರಂದು ತಡರಾತ್ರಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು ಎಂದು ತಿಳಿಸಿದರು. ಅಕ್ರಮವಾಗಿ ತುರ್ತು ಪರಿಸ್ಥಿತಿ ಹೇರುವ ಸಮಯದಲ್ಲಿ ತರಾತುರಿಯ ಕ್ಯಾಬಿನೇಟ್ ಸಭೆ, ರಾಷ್ಟ್ರಪತಿಗಳ ಮೇಲೆ ಒತ್ತಡ ಹೇರಿದರು. ಲೋಕಸಭಾ ಸದಸ್ಯ ಸ್ಥಾನ ರದ್ದಾಗಿ ಜನಾಭಿಪ್ರಾಯ ನನ್ನ ವಿರುದ್ಧವಾದರೆ ಎಂಬ ಆತಂಕ ಇಂದಿರಾ ಗಾಂಧಿ ಅವರನ್ನು ಕಾಡಿದ್ದವು‌. ಆದ್ದರಿಂದಲೇ ರಾಷ್ಟ್ರಪತಿಗಳ ಆದೇಶವನ್ನು ನ್ಯಾಯಾಲಯಗಳು ಪ್ರಶ್ನಿಸುವಂತಿಲ್ಲ ಎಂದು ಸಂವಿಧಾನಕ್ಕೆ 38, 39, 40, 41, 42ನೇ ತಿದ್ದುಪಡಿ ತಂದರು ಎಂದು ಹೇಳಿದರು. ನ್ಯಾಯಾಲಯ ಹಾಗೂ ಸಂಸತ್ ಏನೇ ತಪ್ಪು ಮಾಡಲಿ. ಆದರೆ ಜನತಾ ನ್ಯಾಯಾಲಯ ಇಂದಿರಾ ಗಾಂಧಿಯವರಿಗೆ ಸರಿಯಾದ ತೀರ್ಪು ನೀಡಿತು. ಸಂವಿಧಾನದ ರಕ್ಷಕರಂತೆ ವರ್ತಿಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತನ್ನ ಅಜ್ಜಿ ಮಾಡಿದ ತಪ್ಪಿಗೆ ಸಂಸತ್‌ನಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಲಿ ನೋಡೋಣ ಎಂದು ಮಹೇಶ್ ಸವಾಲು ಹಾಕಿದರು.ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಮಾತನಾಡಿ, ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತದಲ್ಲಿ 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷ ಸಂದಿದೆ . ಇದರ ಹಿಂದೆ ಇಂದಿರಾಗಾಂಧಿ ಅವರ ಸ್ವಾರ್ಥ ರಾಜಕಾರಣಕ್ಕಾಗಿ ಸಂವಿಧಾನವನ್ನು ಕಗ್ಗೊಲೆ ಮಾಡಿ ದೇಶದ ಜನರ ಮೇಲೆ ತುರ್ತು ಪರಿಸ್ಥಿತಿ ಹೇರಿದರು ಎಂದು ಹೇಳಿದರು‌.ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿದರು. ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ವಾಸ ಅನುಭವಿಸಿದ ಜಿಲ್ಲೆಯ ಶ್ರೀನಿವಾಸರೆಡ್ಡಿ ಮತ್ತು ಬಿ.ಸಿ.ಗಂಗಾಧರ್ ಹಾಗೂ ಯೋಧ ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಎಸ್‌ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ರಾಜ್ಯ ಪರಿಷತ್ತು ಸದಸ್ಯ ಸುರೇಶ್, ಮುಖಂಡರಾದ ಪದ್ಮನಾಭ್, ಕಾಳಯ್ಯ, ಚಂದು, ಜಯಣ್ಣ, ಚನ್ನಪ್ಪ, ನಾಗೇಶ್, ಶ್ರೀನಿವಾಸರೆಡ್ಡಿ, ಶ್ರೀನಿವಾಸ್, ಚಂದ್ರಶೇಖರ್, ಸುರೇಶ್, ಪುಷ್ಪಲತಾ, ಚಂದ್ರು, ಕೃಷ್ಣ, ಕಿರಣ್ ಕುಮಾರ್, ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

...ಕೋಟ್ ...ಭಾರತ ದೇಶದಲ್ಲಿ 1975ರಲ್ಲಿ ಇಂದಿರಾಗಾಂಧಿ ಅವರು ಸಂವಿಧಾನವನ್ನು ಕಗ್ಗೋಲೆ ಮಾಡಿ ಸ್ವಾರ್ಥ ಆಡಳಿತದ ಕರಾಳ ದಿನಕ್ಕೆ 50 ವರ್ಷವಾಗಿದೆ. ಪ್ರತಿಯೊಬ್ಬರು ಈ ವಿಷಯಗಳನ್ನು ತಿಳಿದುಕೊಂಡು ಕಾಂಗ್ರೆಸ್ ಪಕ್ಷ ಮಾಡಿರುವ ದ್ರೋಹವನ್ನು ಜನರಿಗೆ ತಿಳಿಸಬೇಕು. ಮುಂದೆ ಎಂದಿಗೂ ದೇಶದಲ್ಲಿ ಇಂತ ಪರಿಸ್ಥಿತಿ ಎದುರಾಗದಂತೆ ಜಾಗೃತವಾಗಿ ಮತದಾನ ಮಾಡಿ ದೇಶ ರಕ್ಷಿಸುವ ಕೆಲಸ ಮಾಡಬೇಕಿದೆ‌.

- ಪ್ರಸಾದ್ ಗೌಡ, ಬಿಜೆಪಿ ಮುಖಂಡ.25ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕ ಬುಧವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿದರು.